Advertisement

ಪ್ರಧಾನಿ ಮೋದಿಯದ್ದು ಸುಳ್ಳು ರಾಷ್ಟ್ರೀಯತಾವಾದ: ಅರವಿಂದ ಕೇಜ್ರಿವಾಲ್‌ ಟೀಕೆ

09:42 AM May 10, 2019 | Sathish malya |

ಹೊಸದಿಲ್ಲಿ : ‘ಪ್ರಧಾನಿ ಮೋದಿ ಅವರು ಸುಳ್ಳು ರಾಷ್ಟ್ರೀಯತಾವಾದದ ಹೆಸರಲ್ಲಿ ಓಟು ಕೇಳುತ್ತಿದ್ದಾರೆ. ಕಳೆದ ಐದು ವರ್ಷಗಳ ತಮ್ಮ ಆಡಳಿತಾವಧಿಯಲ್ಲಿ ಅವರು ಜುಮ್ಲೆಬಾಜಿ, ವಿದೇಶ ಪ್ರವಾಸ ಮತ್ತು ಭಾಷಣಗಳನ್ನು ಬಿಟ್ಟರೆ ಬೇರೆ ಯಾವ ಕೆಲಸವನ್ನೂ ಮಾಡಿಲ್ಲ’  ಎಂದು ದಿಲ್ಲಿ ಮುಖ್ಯಮಂತ್ರಿ ಹಾಗೂ ಆಮ್‌ ಆದ್ಮಿ ಪಕ್ಷದ ಮುಖ್ಯಸ್ಥರಾಗಿರುವ ಅರವಿಂದ ಕೇಜ್ರಿವಾಲ್‌ ಆರೋಪಿಸಿದ್ದಾರೆ.

Advertisement

ಪ್ರಧಾನಿ ಅವರು “ದಿಲ್ಲಿ ಸರಕಾರ ನಾಕಾಮ್‌ಪಂಥಿ ಅಂದರೆ ಕೆಲಸ ಮಾಡದ ವ್ಯವಸ್ಥೆಯನ್ನು ಜಾರಿಗೆ ತಂದಿದೆ” ಎಂದು ಟೀಕಿಸಿರುವುದಕ್ಕೆ ಪ್ರತಿಯಾಗಿ ಕೇಜ್ರಿವಾಲ್‌ ಅವರು ಈ ಮಾತನ್ನು ಹೇಳಿದ್ದಾರೆ.

”ನಮ್ಮ ಆಮ್‌ ಆದ್ಮಿ ಪಕ್ಷ ಶಿಕ್ಷಣ, ಆರೋಗ್ಯ, ವಿದ್ಯುತ್‌, ನೀರು ಮುಂತಾದ ಬಹುಮುಖ್ಯ ಕ್ಷೇತ್ರಗಳಲ್ಲಿ ದುಡಿದು ಜನಸೇವೆ ಮಾಡಿದೆ; ನಿಮ್ಮ ಸರಕಾರ ಏನು ಮಾಡಿದೆ” ಎಂದು ಕೇಜ್ರಿವಾಲ್‌ ತಮ್ಮ ಟ್ವೀಟ್‌ ನಲ್ಲಿ ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next