Advertisement

ಚರ್ಚೆಗೆ ಬಾರದ ಮೋದಿ: ಆರೋಪ

01:25 AM Jan 06, 2019 | Team Udayavani |

ಬೆಂಗಳೂರು:ಪ್ರಧಾನಿ ನರೇಂದ್ರಮೋದಿಯವರು ಸಂಸತ್ತಿಗೆ ಬಂದು ಪ್ರತಿಪಕ್ಷಗಳು ಪ್ರಸ್ತಾಪಿಸಿದ ವಿಷಯಗಳಿಗೆ ಉತ್ತರ ನೀಡದೆ ಮನೆಗೆ ಮಾಧ್ಯಮದವರನ್ನು ಕರೆದು ಸಂದರ್ಶನ ನೀಡುತ್ತಾ  ಮುಖಾಮುಖೀ ಚರ್ಚೆಯಿಂದ ವಿಮುಖರಾಗುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಆರೋಪಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸತ್‌ನಲ್ಲಿ ಅರುಣ್‌ ಜೇಟಿÉ , ನಿರ್ಮಲಾ ಸೀತಾರಾಮನ್‌ ಅವರು ಮಾತನಾಡಿದ್ದಾರೆ. ಕೆಲವು ವಿಚಾರಗಳಲ್ಲಿ ಗಟ್ಟಿಯಾಗಿಯೇ ಹೇಳಿದ್ದಾರೆ. ಆದರೆ, ಪ್ರಧಾನಿ ಯಾಕೆ ಸಂಸತ್‌ಗೆ ಬಂದು ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದರು.

ರಫೇಲ್‌ ಒಪ್ಪಂದ ಸೇರಿದಂತೆ ಯಾವುದೇ ವಿಚಾರ ಮಾತನಾಡಲು ಅವರು ಸ್ವತಂತ್ರರಿದ್ದಾರೆ.  ಪ್ರಧಾನಿಯಾದವರು ಎಲ್ಲರ ಮಾತು ಕೇಳಬೇಕು, ಎಲ್ಲ ವಿಚಾರಗಳ ಬಗ್ಗೆಯೂ ಕೇಳಿಸಿಕೊಳ್ಳುವ ಸಮಾಧಾನವೂ ಇರಬೇಕು. ಆದರೆ, ಪ್ರತಿಯೊಂದಕ್ಕೂ ಟೀಕೆ ಮಾಡಿ, ಹೊರಗಡೆ ಮಾತನಾಡೋದು ಎಷ್ಟು ಸರಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next