Advertisement

Election; ವೋಟಿಗಾಗಿ ತಮಿಳರಿಗೆ ಮೋದಿ ಅವಹೇಳನ: ಸಿಎಂ ಸ್ಟಾಲಿನ್‌ ಕಿಡಿ

11:54 PM May 21, 2024 | Team Udayavani |

ಚೆನ್ನೈ: “ಪುರಿ ಜಗನ್ನಾಥ ದೇಗುಲದ ರತ್ನ ಭಂಡಾರದ ಕೀಲಿ ಕೈ ವಿಚಾರವನ್ನಿಟ್ಟುಕೊಂಡು ವೋಟಿಗಾಗಿ ಮೋದಿ ತಮಿಳುನಾಡಿನ ಜನರನ್ನು ದೂಷಿಸುತ್ತಿದ್ದಾರೆ. ಈ ಮೂಲಕ ಖುದ್ದು ಭಗವಂತ ಜಗನ್ನಾಥ ಹಾಗೂ ಆತನ ಅಸಂಖ್ಯಾತ ಭಕ್ತರನ್ನು ಪ್ರಧಾನಿ ಅವಮಾನಿಸಿದ್ದಾರೆ’ ಎಂದು ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್‌ ಚೆನ್ನೈನಲ್ಲಿ ದೂರಿದ್ದಾರೆ.

Advertisement

ಸೋಮವಾರ ಮಾತನಾಡಿದ್ದ ಮೋದಿ “ಜಗನ್ನಾಥ ದೇಗುಲದ ರತ್ನ ಭಂಡಾರದ ಕೀ ಕಾಣೆ ಬಗ್ಗೆ ಇರುವ ನ್ಯಾಯಾಂಗ ವರದಿಯಲ್ಲಿ ಕೀ ತಮಿಳುನಾಡಿಗೆ ಹೋಗಿರುವುದರ ಬಗ್ಗೆ ತಿಳಿಸಲಾಗಿದೆ’ ಎಂದಿದ್ದರು. ಈ ಹಿನ್ನೆಲೆಯಲ್ಲಿ ಸ್ಟಾಲಿನ್‌ ಪ್ರತಿಕ್ರಿಯಿಸಿ ದೇವಸ್ಥಾನದ ಸಂಪತ್ತು ಕದ್ದ ಕಳ್ಳರು ಎಂದು ತಮಿಳರನ್ನು ಪ್ರಧಾನಿ ಅವಮಾನಿಸಬಹುದೇ? ನಮ್ಮ ಮೇಲೆ ಅವರಿಗೆ ಯಾಕಿಷ್ಟು ದ್ವೇಷ ಎಂದು  ಅವರು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next