Advertisement

ಮೋದಿ, ಗದ್ದಿಗೌಡರ ಗೆದ್ದಿದ್ದಕ್ಕೆ ಒಂದಿಡೀ ದಿನ ಉಚಿತ ಕ್ಷೌರ!

12:29 AM May 25, 2019 | Lakshmi GovindaRaj |

ಬಾಗಲಕೋಟೆ: ನರೇಂದ್ರ ಮೋದಿ ಮತ್ತೆ ಪ್ರಧಾನಿಯಾದರೆ ಹಾಗೂ ಬಾಗಲಕೋಟೆ ಕ್ಷೇತ್ರದಿಂದ ಪಿ.ಸಿ.ಗದ್ದಿಗೌಡರ ಪುನರಾಯ್ಕೆಯಾದರೆ ಉಚಿತ ಕ್ಷೌರ ಮಾಡುವ ಹರಕೆ ಹೊತ್ತಿದ್ದ ನಗರದ ಮೋದಿ ಅಭಿಮಾನಿ ಯುವಕರು, ಶುಕ್ರವಾರ ಇಡೀ ದಿನ ಉಚಿತ ಕ್ಷೌರ ಮಾಡುವ ಮೂಲಕ ಗಮನ ಸೆಳೆದರು.

Advertisement

ನಗರದ ಲಕ್‌ ಹೇರ್‌ ಕಟಿಂಗ್‌ ಸೆಲ್ಯೂನ್‌ ಅಂಗಡಿಯ ಮುಖ್ಯಸ್ಥರು ಆಗಿರುವ ಮೋದಿ ಅಭಿಮಾನಿ ಸುನೀಲ ಶಹಾಪುರ, ನಿಶಾಂತ, ನಿಖೀಲ್‌ ಹಾಗೂ ಶಿವರಾಮ ಅವರು, ತಮ್ಮ ಅಂಗಡಿಯಲ್ಲಿ ಶುಕ್ರವಾರ ಒಟ್ಟು 76 ಜನರಿಗೆ ಉಚಿತ ಕ್ಷೌರ ಮಾಡಿದರು.

ಮೋದಿ ಮತ್ತೂಮ್ಮೆ ಪ್ರಧಾನಿಯಾದರೆ, ಬಾಗಲಕೋಟೆ ಕ್ಷೇತ್ರದಿಂದ ಗದ್ದಿಗೌಡರು ಮತ್ತೂಮ್ಮೆ ಆಯ್ಕೆಯಾದರೆ ಒಂದು ದಿನ ಉಚಿತ ಕ್ಷೌರ ಮಾಡುವುದಾಗಿ ಮೊದಲೇ ಘೋಷಿಸಿದ್ದ ಸುನೀಲ ಶಹಾಪುರ, ಗುರುವಾರ ಲೋಕಸಭೆ ಚುನಾವಣೆಯ ಫಲಿತಾಂಶ ಹೊರ ಬೀಳುತ್ತಿದ್ದಂತೆ, ತಮ್ಮ ಅಂಗಡಿಯ ಎದುರು ಪಟಾಕಿ ಸಿಡಿಸಿ, ಸಿಹಿ ಹಂಚಿದ್ದರು.

ಶುಕ್ರವಾರ ಬೆಳಗ್ಗೆ 5.30ಕ್ಕೆ ಅಂಗಡಿಯ ಬಾಗಿಲು ತೆರೆದು ತಮ್ಮ ಸೇವೆ ಆರಂಭಿಸಿದ್ದರು. ಮಧ್ಯಾಹ್ನ 2ರ ಹೊತ್ತಿಗೆ ಅಂಗಡಿಯ ನಾಲ್ಕು ಜನರು ಕೂಡಿ ಒಟ್ಟು 76 ಜನರಿಗೆ ಕ್ಷೌರ ಮಾಡಿದರು.

ಮೋದಿ ಮತ್ತೆ ಪ್ರಧಾನಿಯಾದರೆ ಮತ್ತು ಗದ್ದಿಗೌಡರು ಬಾಗಲಕೋಟೆ ಕ್ಷೇತ್ರಕ್ಕೆ ಆಯ್ಕೆಯಾದರೆ ಉಚಿತ ಕ್ಷೌರ ಮಾಡುವುದಾಗಿ ಕೇಳಿಕೊಂಡಿದ್ದೆ. ನಾನು ಅಂದುಕೊಂಡಂತೆ ಫಲಿತಾಂಶ ಬಂದಿದ್ದು, ಶುಕ್ರವಾರ ನಮ್ಮ ಅಂಗಡಿಯಲ್ಲಿ ಪೂರ್ಣದಿನ ಉಚಿತ ಸೇವೆ ಮಾಡಿದ್ದೇವೆ.
-ಸುನೀಲ ಶಹಾಪುರ, ಮೋದಿ ಅಭಿಮಾನಿ

Advertisement
Advertisement

Udayavani is now on Telegram. Click here to join our channel and stay updated with the latest news.

Next