Advertisement

ಮೋದಿಗೆ ಸ್ಕ್ರಿಪ್ಟ್ ಬೇಕಾಗಿಲ್ಲ

06:10 AM Dec 21, 2018 | |

ನವದೆಹಲಿ: “ಪತ್ರಕರ್ತರನ್ನು ಎದುರಿಸಲು ನಾನು ಭಯಪಡುತ್ತಿರಲಿಲ್ಲ” ಎಂದು ಮಾಜಿ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ ಅವರ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ. 

Advertisement

ಪ್ರಧಾನಿ ಮೋದಿಗೆ ಯಾರೂ ಸ್ಕ್ರಿಪ್ಟ್ ಬರೆದುಕೊಡಬೇಕಾಗಿಲ್ಲ, ಹಾಗೆಯೇ ಟೆಲಿಪ್ರಾಂಪ್ಟರ್‌ ಕೂಡ ಬೇಕಾಗಿಲ್ಲ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಟಾಸ್‌ ನಖ್ವಿ ಹೇಳಿದ್ದಾರೆ. ಸೋಮವಾರ ನಡೆದ ತಮ್ಮದೇ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು, ಪತ್ರಿಕಾಗೋಷ್ಠಿ ನಡೆಸದ ಪ್ರಧಾನಿ ಮೋದಿ ವಿರುದ್ಧ ಟೀಕೆ ಮಾಡಿದ್ದರು. ನಾನು ಪ್ರತಿ ಬಾರಿ ವಿದೇಶ ಪ್ರವಾಸಕ್ಕೆ ಹೋದಾಗಲೂ ವಿಮಾನದಲ್ಲೇ ಪತ್ರಿಕಾಗೋಷ್ಠಿ ನಡೆಸುತ್ತಿದ್ದೆ. ಆದರೆ, ಈಗ ಮೋದಿ ಅವರು ಪತ್ರಿಕಾಗೋಷ್ಠಿಯನ್ನೇ ನಡೆಸಿಲ್ಲ ಎಂದಿದ್ದರು.

ಈ ಸಂಬಂಧ ಮಂಗಳವಾರ ಮಾತನಾಡಿದ ಬಿಜೆಪಿ ನಾಯಕ ಮುಖಾ¤ರ್‌ ಅಬ್ಟಾಸ್‌ ನಖೀÌ, ಡಾ. ಸಿಂಗ್‌ ಅವರು, ಯಾರೋ ಬರೆದುಕೊಟ್ಟದ್ದನ್ನು, ಟೆಲಿಪ್ರಾಂಪ್ಟರ್‌ನಲ್ಲಿ ಬಂದದ್ದನ್ನು ಅಥವಾ ಯಾರೋ ನಿರ್ದೇಶಿಸಿದ್ದನ್ನು ಮಾತನಾಡುತ್ತಿದ್ದರು. ಡಾ. ಸಿಂಗ್‌ ಕೈಗೊಂಬೆ ಪ್ರಧಾನಿಯಾಗಿದ್ದರು ಎಂದು ಛೇಡಿಸಿದ್ದಾರೆ. ಇನ್ನು ಬಿಜೆಪಿಯ ಮತ್ತೂಬ್ಬ ಹಿರಿಯ ನಾಯಕ ಸುಬ್ರಮಣಿಯನ್‌ ಸ್ವಾಮಿ ಕೂಡ ಡಾ. ಸಿಂಗ್‌ ವಿರುದ್ಧ ವ್ಯಂಗ್ಯವಾಡಿದ್ದಾರೆ. ಪತ್ರಿಕಾಗೋಷ್ಠಿ ನಡೆಸುವುದು ದೊಡ್ಡದಲ್ಲ, ಅದರಲ್ಲಿ ನೀವು ಏನು ಮಾತನಾಡುತ್ತೀರಿ ಎಂಬುದೇ ಮುಖ್ಯ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next