Advertisement

ಮೋದಿ-ಬೈಡೆನ್‌ ಪಾಕ್‌ ಉಗ್ರವಾದಕ್ಕೆ ತಿವಿದಿದ್ದೇ ಪಾಕ್‌ ಮಾಧ್ಯಮಗಳಲ್ಲಿ ಮುಖ್ಯಾಂಶ !

08:53 PM Jun 23, 2023 | Team Udayavani |

ಇಸ್ಲಾಮಾಬಾದ್‌: ಪಾಕಿಸ್ತಾನ ಉಗ್ರರನ್ನು ಹತ್ತಿಕ್ಕಬೇಕೆಂದು ಮೋದಿ ಮತ್ತು ಬೈಡೆನ್‌ ಅವರು ಪ್ರತಿಪಾದಿಸಿರುವುದೇ ಪಾಕಿಸ್ತಾನದ ಮಾಧ್ಯಮಗಳಲ್ಲಿ ಮುಖ್ಯಾಂಶವಾಗಿದೆ. ಈ ವೇಳೆ 26/11 ಮುಂಬೈ ದಾಳಿ ಮತ್ತು ಪಠಾಣ್‌ಕೋಟ್‌ ದಾಳಿಯ ಅಪರಾಧಿಗಳನ್ನು ಶಿಕ್ಷೆಗೆ ಒಳಪಡಿಸಬೇಕು ಎಂದು ಉಭಯ ನಾಯಕರು ಆಗ್ರಹಿಸಿದ್ದಾರೆ.

Advertisement

ಜತೆಗೆ ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳಾದ ಲಷ್ಕರ್‌ ಎ ತೊಯ್ಬಾ, ಜೈಶ್‌ ಎ ಮೊಹಮ್ಮದ್‌ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಪಾದಿಸಿದ್ದಾರೆ. ಉಗ್ರ ದಾಳಿಗಳಿಗೆ ಪಾಕಿಸ್ತಾನದ ನೆಲವನ್ನು ಭಯೋತ್ಪಾದಕರು ಬಳಸುವುದಿಲ್ಲ ಎಂಬುದನ್ನು ಇಸ್ಲಾಮಾಬಾದ್‌ ಖಚಿತಪಡಿಸಿಕೊಳ್ಳಬೇಕು. ವಿಶ್ವಸಂಸ್ಥೆ ಉಗ್ರ ಸಂಘಟನೆ ಎಂದು ಘೋಷಿಸಿರುವ ಅಲ್‌ಖೈದಾ, ಹಿಜ್ಬುಲ್‌ ಮುಜಾಹಿದ್ದೀನ್‌ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಉಭಯ ನಾಯಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next