Advertisement

ಮಂಗಳೂರು: ಕೆಪಿಟಿ ಬಳಿ ವಾಹನಗಳ ಸರಣಿ ಅಪಘಾತ…ಸಂಚಾರ ವ್ಯತ್ಯಯ

11:56 PM Feb 26, 2023 | Team Udayavani |

ಮಂಗಳೂರು: ನಗರದ ಕೆಪಿಟಿ ಜಂಕ್ಷನ್‌ ಬಳಿ ರವಿವಾರ ರಾತ್ರಿ 7 ಗಂಟೆಯ ಸುಮಾರಿಗೆ ಸರಣಿ ಅಪಘಾತ ಸಂಭವಿಸಿ ಓರ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು.

Advertisement

ಕಾರೊಂದು ಯು ಟರ್ನ್ ತೆಗೆದುಕೊಳ್ಳುವ ವೇಳೆ ಅದಕ್ಕೆ ಮೀನು ಸಾಗಾಟದ ಪಿಕಪ್‌ ವಾಹನ ಢಿಕ್ಕಿ ಹೊಡೆಯಿತಲ್ಲದೇ ಬಳಿಕ ಪಕ್ಕದ ವಿದ್ಯುತ್‌ ಕಂಬಕ್ಕೂ ಢಿಕ್ಕಿಯಾಯಿತು. ಅದೇ ಸಮಯ ಹಿಂದಿನಿಂದ ಬಂದ ಹಾಲಿನ ವಾಹನ ಪಿಕಪ್‌ ವಾಹನಕ್ಕೆ ಢಿಕ್ಕಿಯಾಯಿತು. ಹಾಲಿನ ವಾಹನದ ಚಾಲಕ ಗಾಯಗೊಂಡು ಸಿಲುಕಿಕೊಂಡಿದ್ದು ಅವರನ್ನು ಹರಸಾಹಸ ಪಟ್ಟು ಹೊರತೆಗೆಯ ಲಾಯಿತು. ಹಾಲಿನ ವಾಹನ ಮತ್ತು ಪಿಕಪ್‌ ಒಂದಕ್ಕೊಂದು ಸಿಲುಕಿಕೊಂಡಿದ್ದು ಕ್ರೇನ್‌ ಬಳಸಿ ಅವುಗಳನ್ನು ಬೇರ್ಪಡಿಸಲಾಯಿತು. ಮೂರು ವಾಹನಗಳಿಗೂ ಹಾನಿ ಯಾಗಿದೆ. ಸಂಚಾರ ಪೂರ್ವ ಠಾಣೆಯ ಪೊಲೀಸರು ಸ್ಥಳದಲ್ಲಿದ್ದು ಕಾರ್ಯಾಚರಣೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next