ಹುಬ್ಬಳ್ಳಿ: ಯಡಿಯೂರಪ್ಪ ಅವರ ಈಗಿನ ಪರಿಸ್ಥಿತಿ ನೋಡಿದರೆ ನಾಲಿಗೆ ಕಳೆದುಕೊಂಡ ನಾಯಕ, ದಾರಿ ತಪ್ಪಿದ ಮಗ ಎಂದು ತಲೆಬರಹ ಕೊಡಬಹುದು. ಅವರ ಜೀವ ಮಗ ವಿಜಯೇಂದ್ರನ ಕೈಯಲ್ಲಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ ಟೀಕಿಸಿದರು.
ನಾನು ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದಿಲ್ಲ, ಆವತ್ತು ನಡೆದಂತಹ ಮಾತುಕತೆ ಹಾಗೂ ನಡವಳಿಕೆ ಯಾವುದೇ ಪಕ್ಷದಲ್ಲಿ ಉಳಿದಿಲ್ಲ. ಯಾವುದೇ ನಾಯಕರು ಮಾತು ಉಳಿಸಿಕೊಳ್ಳತ್ತಿಲ್ಲ ಎಂಬ ನೋವಿದೆ. ಯಡಿಯೂರಪ್ಪನವರು ನನಗೆ ಯಾಕೆ ಸಚಿವ ಸ್ಥಾನ ಕೊಟ್ಟಿಲ್ಲಾ ಎನ್ನುವುದನ್ನು ಅವರೇ ಹೇಳಬೇಕು. ನಮಗೆ ಏನೂ ಮಾತು ಕೊಟ್ಟಿದ್ದರು ಎಂಬುದು ಅವರು ಬಹಿರಂಗ ಪಡಿಸಲಿ. ನಾನು ಯಾವುದೇ ರೀತಿ ಬಂಡಾಯ ಏಳುವ ಮಾತೇ ಇಲ್ಲ ಎಂದರು.
ಇದನ್ನೂ ಓದಿ:ಸಂತೋಷ ಕೂಟಕ್ಕೆ ಹೊರಟವರು ಮಸಣ ಸೇರಿದರು! ಭೀಕರ ಅಪಘಾತದಲ್ಲಿ 9 ಮಂದಿ ಮಹಿಳೆಯರು ಸೇರಿ 11 ಸಾವು
ಸಿಡಿ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಹೇಳಬೇಕು. ನಾನು ಸಿಡಿ ಇದೆ ಎಂದು ಹೇಳಿದ್ದೆ ಅಷ್ಟೇ. ಜ. 17ರಂದು ಕೇಂದ್ರ ಗೃಹ ಸಚಿವ ಅಮಿತ ಶಾ ಭೇಟಿಗೂ ಅವಕಾಶ ಕೇಳಿದ್ದೇನೆ. ಕೊಟ್ಟರೆ ರಾಜ್ಯದ ಪರಿಸ್ಥಿತಿ ಗಮನಕ್ಕೆ ತರುವೆ. ಪಕ್ಷದ ವಿರುದ್ಧ ನನ್ನ ಹೋರಾಟವಲ್ಲ. ನಾಯಕರ ದುರಂಹಕಾರ ವಿರುದ್ಧವಾಗಿದೆ. ಶೀಘ್ರವೇ ಬಾಂಬೆ ದಿನಗಳ ಕುರಿತು ಪುಸ್ತಕ ಬರೆದು ಬಿಡುಗಡೆ ಮಾಡುವೆ ಎಂದರು.
ಇದನ್ನೂ ಓದಿ:ಸಚಿವರಾಗಿ ಅಂಗಾರ ಇದು ಮೊದಲ ಬಾರಿ ಜಿಲ್ಲೆಗೆ