Advertisement

ಸೈದಾಪುರ: ಎಂಎಲ್‌ಸಿ ಟಿಕೆಟ್ ಗೆ ಚಿಂಚನಸೂರ್ ಹೆಸರು ಘೋಷಣೆ, ಕೋಲಿ ಸಮಾಜ ಹರ್ಷ

07:39 PM Aug 01, 2022 | Team Udayavani |

ಸೈದಾಪುರ: ಕ.ಕ.ಭಾಗದ ಹಿಂದುಳಿದ ಕೂಲಿ ಸಮಾಜದ ಪ್ರಭಾವಿ ನಾಯಕ ಬಾಬುರಾವ್ ಚಿಂಚನಸೂರ್ ಅವರಿಗೆ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟ ಬಿಜಿಪಿಯ ಕೇಂದ್ರ ಮತ್ತು ರಾಜ್ಯ ನಾಯಕರಿಗೆ ಸಮಸ್ತ ಕೋಲಿ ಸಮಾಜದಿಂದ ಶ್ಲಾಘಿಸುತೆವೆ ಎಂದು ತಾಪಂ ಮಾಜಿ ಸದಸ್ಯೆ, ಕೂಲಿ ಸಮಾಜದ ಯುವ ಮುಖಂಡ ಚಂದಪ್ಪ ಕಾವಲಿ ತಿಳಿಸಿದರು.

Advertisement

ಈ ಕುರಿತು ಪತ್ರಿಕೆ ಹೇಳಿಕೆ ನೀಡಿರುವ ಅವರು, ನಮ್ಮ ಸಮುದಾಯವು ಕಲ್ಯಾಣ ಕರ್ನಾಟಕ ಭಾಗದ ಹಲವು ವಿಧಾನಸಭಾ ಮತ ಕ್ಷೇತ್ರಗಳಲ್ಲಿ ಪ್ರಮುಖ ನಿರ್ಣಾಕ ಪಾತ್ರವಹಿಸುತ್ತಾರೆ.

ಆದರಿಂದ ನಮ್ಮ ಸಮುದಾಯದ ಪ್ರಭಾವಿ ಮತ್ತು ಇತರೆ ಹಿಂದುಳಿದ ಸಮಾಜದ ಧ್ವನಿಯಾಗಿರುವ ಬಾಬುರಾವ್ ಚಿಂಚನಸೂರರಿಗೆ ಎಂಮಲ್ಸಿ ಟಿಕಿಟ್ ನೀಡುವ ಮೂಲಕ ಗೌರವ ಮತ್ತು ಪ್ರಾತಿನಿತ್ಯ ದೊರಕಿಸಕೊಟ್ಟ ಬಿಜೆಪಿ ನಾಯಕರಿಗೆ ಕೃತಜ್ಞನತೆಗಳನ್ನು ತಿಳಿಸುವುದರೊಂದಿಗೆ ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಗುರುಮಠಕಲ್ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿಯನ್ನು ಗೆಲ್ಲಿಸುತ್ತೆವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ : ಭಕ್ತಿ ಭಾವದ ಪ್ರತೀಕ ಬೂದಿಹಾಳ ಅಡಿವೆಪ್ಪ ಮಹಾರಾಜರು

Advertisement

Udayavani is now on Telegram. Click here to join our channel and stay updated with the latest news.

Next