Advertisement

Sindhanur: ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಸನಗೌಡ ಬಾದರ್ಲಿಗೆ ಎಂಎಲ್ಸಿ ಟಿಕೆಟ್

05:41 PM Jun 02, 2024 | Team Udayavani |

ಸಿಂಧನೂರು: ಸತತ ಹೋರಾಟದ ಬಳಿಕ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಸನಗೌಡ ಬಾದರ್ಲಿಗೆ ಎಂಎಲ್ಸಿ ಟಿಕೆಟ್ ಘೋಷಿಸುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಭಾನುವಾರ ಭರ್ಜರಿ ಉಡುಗೊರೆ ನೀಡಿದೆ.

Advertisement

ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭ ಕಾಂಗ್ರೆಸ್ ಟಿಕೆಟ್ ಗೆ ಪ್ರಯತ್ನಿಸಿ, ಕೊನೆ ಗಳಿಗೆಯಲ್ಲಿ ಟಿಕೆಟ್ ಸಿಗದೇ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಎಐಸಿಸಿ ಉಸ್ತುವಾರಿ ಅರವಿಂದ ಸುರ್ಜೇವಾಲ್, ನಲ್ಪಾಡ್ ಸಿಂಧನೂರಿಗೆ ಆಗಮಿಸಿ ನಾಮಪತ್ರ ವಾಪಸ್ ತೆಗೆಯಿಸಿದ್ದರು. ಈ ವೇಳೆ ಮುಂದಿನ ದಿನಗಳಲ್ಲಿ ಪಕ್ಷದಿಂದ ಉತ್ತಮ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದರು. ಕೊನೆಗೂ ಬೇಡಿಕೆ ಈಡೇರಿಸಿದಂತಾಗಿದೆ‌. ಎಐಸಿಸಿಯ ಟಿಕೆಟ್ ಘೋಷಣೆ ತಿಳಿಯುತ್ತಿದ್ದಂತೆ ಬಸನಗೌಡ ಬಾದರ್ಲಿ ಬೆಂಬಲಿಗರಲ್ಲಿ ಸಂತಸ ಮನೆ ಮಾಡಿದೆ.

ಇದನ್ನೂ ಓದಿ: Amit Shah ವಿರುದ್ಧ ಗಂಭೀರ ಆರೋಪ: ಜೈರಾಮ್ ರಮೇಶ್ ಬಳಿ ಮಾಹಿತಿ ಕೇಳಿದ ಆಯೋಗ

Advertisement

Udayavani is now on Telegram. Click here to join our channel and stay updated with the latest news.

Next