Advertisement

ಸ್ವರಾಜ್ಯ ಕನಸು ನನಸು ಮಾಡುವತ್ತ ಮೋದಿ’

03:47 AM Jan 27, 2019 | |

ಬೆಂಗಳೂರು: ರಾಷ್ಟ್ರಪಿತ ಮಹಾತ್ಮಗಾಂಧಿ ಅವರು ಕಂಡ ಸ್ವರಾಜ್ಯದ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಕೆಲಸ ಮಾಡುತ್ತಿದ್ದಾರೆ ಎಂದು ವಿಧಾನಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ತಿಳಿಸಿದ್ದಾರೆ.

Advertisement

ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕಾಂಗ್ರೆಸ್‌ನವರು ಮಹಾತ್ಮಗಾಂಧಿ ಹಾಗೂ ಸ್ವರಾಜ್ಯದ ಬಗ್ಗೆ ಮಾತನಾಡುತ್ತಾರೆ. ಆದರೆ, ಬರೀ ಹೇಳಿಕೆಯಲ್ಲೇ ದಶಕಗಳನ್ನು ಕಳೆದಿದ್ದಾರೆ. ಮೋದಿ ಅವರು ಹಾಗಲ್ಲ. ಸ್ವಾತಂತ್ರ್ಯಾ ನಂತರ ನೆಹರು ಅವರ ಬದಲು ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಪ್ರಧಾನಿಯಾಗಿದ್ದರೆ ದೇಶದ ಚಿತ್ರಣವೇ ಇಷ್ಟೊತ್ತಿಗೆ ಬದಲಾಗುತ್ತಿತ್ತು ಎಂದು ತಿಳಿಸಿದರು. ಮೋದಿ ಅವರು ವಿಶ್ವ ನಾಯಕರ ಸಾಲಿನಲ್ಲಿ ನಿಲ್ಲುತ್ತಾರೆ. ಅವರಿಗೆ ಭಾರತವನ್ನು ವಿಶ್ವದ ನಂಬರ್‌ ಒನ್‌ ರಾಷ್ಟ್ರ ಮಾಡಬೇಕು ಎಂಬ ಕನಸು ಇದೆ.

ಅದಕ್ಕೆ ನಾವೆಲ್ಲರೂ ಜತೆಗೂಡಿ ಮತ್ತೂಮ್ಮೆ ಮೋದಿ ಪ್ರಧಾನಿಯಾಗಲು ಶ್ರಮಿಸಬೇಕು ಎಂದು ಹೇಳಿದರು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಕಡಿಮೆ ಸೀಟು ದೊರೆಯಲಿದೆ ಎಂಬ ಸಮೀಕ್ಷಾ ವರದಿ ನಿಜವಾಗದು. ಬಿಜೆಪಿ ಅತ್ಯಂತ ಹೆಚ್ಚು ಸ್ಥಾನ ಪಡೆದು ಮತ್ತೆ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next