Advertisement

ಬ್ರಿಡ್ಜ್ ಕಾಮಗಾರಿ ಸ್ಥಳಕ್ಕೆ ಶಾಸಕರ ಭೇಟಿ

12:41 PM May 13, 2021 | Team Udayavani |

ಬಸವಕಲ್ಯಾಣ: ತಾಲೂಕಿನ ನಾರಾಯಣಪುರ ಗ್ರಾಮದಿಂದ ಗುಣತೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಧ್ಯೆದಲ್ಲಿ ನಡೆಯುತ್ತಿರುವ ಬ್ರಿಡ್ಜ್ ಕಾಮಗಾರಿ ಸ್ಥಳಕ್ಕೆ ಶಾಸಕ ಶರಣು ಸಲಗರ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ನಂತರ ಮಾತನಾಡಿದ ಅವರು, ರೈತರ ಹಿತದೃಷ್ಟಿಯಿಂದ 5 ಲಕ್ಷ ರೂ. ಅನುದಾನದಲ್ಲಿ ಈ ಕಾಮಗಾರಿ ಕೈಗೊಳ್ಳಲಾಗಿದೆ. ಆದ್ದರಿಂದ ಸಂಬಂಧ ಪಟ್ಟವರು ಈ ಕೆಲಸವನ್ನು ಗುಣಮಟ್ಟದಿಂದ ಮಾಡಬೇಕು. ಅಂದಾಗ ಮಾತ್ರ ನಮಗೆ ಗೌರವ ಸಿಗುತ್ತದೆ. ಇಲ್ಲದಿದ್ದರೆ ಜನರ ನಂಬಿಕೆ ಕಳೆದುಕೊಳ್ಳಬೇಕಾಗುತ್ತದೆ.

ಅದಕ್ಕೆ ಯಾರು ಆಸ್ಪದೆ ಕೊಡಬಾರದು ಎಂದು ಮನವಿ ಮಾಡಿದರು. ನಂತರ ಗ್ರಾಮದ ಐತಿಹಾಸಿಕ ಶಿವ ಮಂದಿರಕ್ಕೆ ಭೇಟಿ ನೀಡಿ ದರುಶನ ಪಡೆದರು. ಈ ಸಂದರ್ಭದಲ್ಲಿ ಪಿಡಿಒ ಪ್ರಶಾಂತರೆಡ್ಡಿ ಪಾಟೀಲ, ರಾಜರೆಡ್ಡಿ ಪಾಟೀಲ, ರವಿ ಸ್ವಾಮಿ, ಮಹಾಂತಯ್ನಾ ಸ್ವಾಮಿ, ಅರ್ಜುನಸಿಂಗ ರಾಜಪೂರ, ನವನಾಥ ಮಂಗಳೂರೆ, ದೀಪಕರೆಡ್ಡಿ ಯಡಮಲ್ಲೆ, ಸಂದೀಪ ಬಿರಾದಾರ್‌, ಗ್ರಾಪಂ ಮಾಜಿ ಅಧ್ಯಕ್ಷ ಕ್ರಿಷ್ಣಾರೆಡ್ಡಿ ಎಡಮಲ್ಲೆ, ಗ್ರಾಪಂ ಸದಸ್ಯ ಪೋಪಟ ಜಮಾದಾರ, ವಿಠಲರೆಡ್ಡಿ ಎಡಮಲ್ಲೆ, ಆಕಾಶರೆಡ್ಡಿ ಪಾಟೀಲ, ರೇಕುಳಗೆ ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next