Advertisement

ಬೊಳ್ಳಾವು: ಭೂ ಕುಸಿತ ಪ್ರದೇಶಕ್ಕೆ ಶಾಸಕರ ಭೇಟಿ

11:46 AM Aug 23, 2018 | Team Udayavani |

ಉಪ್ಪಿನಂಗಡಿ: ಇಲ್ಲಿನ ಪೆರಿಯಡ್ಕ ಸಮೀಪದ ಬೊಳ್ಳಾವು ಎನ್ನುವಲ್ಲಿ ಭಾರೀ ಭೂ ಕುಸಿತ ಉಂಟಾಗಿ ಕೃಷಿ ಪ್ರದೇಶ ಹಾನಿಯಾದ ಸ್ಥಳಕ್ಕೆ ಶಾಸಕ ಸಂಜೀವ ಮಠಂದೂರು ಭೇಟಿ ನೀಡಿ ಪರಿಶೀಲನೆ ನಡೆಸಿದರು. 

Advertisement

ಇಲ್ಲಿ 500 ಮೀ. ಉದ್ದ ಹಾಗೂ 400 ಮೀ. ಅಗಲಕ್ಕೆ ಭೂ ಕುಸಿತವುಂಟಾಗಿದ್ದು, ಗುಡ್ಡ ಪ್ರದೇಶವು ಸಂಪೂರ್ಣವಾಗಿ ಜಾರಿ ಕೆಳಗಡೆ ಬಂದಿದ್ದರಿಂದ ಕೃಷ್ಣಪ್ಪ ಗೌಡ, ದೇವಪ್ಪ ಗೌಡ, ಮುತ್ತಪ್ಪ ಗೌಡ, ರುಕ್ಮಯ ಗೌಡ ಹಾಗೂ ಬಾಲಕೃಷ್ಣ ಎಂಬವರ ಅಡಿಕೆ ತೋಟ ನಾಶವಾಗಿದ್ದು, ಗುಡ್ಡದಲ್ಲಿದ್ದ ಹಲವು ಮರಗಳು ಧರಾಶಾಯಿಯಾಗಿತ್ತು. ಶಾಸಕರೊಂದಿಗೆ ಗ್ರಾ.ಪಂ. ಸದಸ್ಯ ಸುರೇಶ್‌ ಅತ್ರಮಜಲು, ತಾ.ಪಂ. ಮಾಜಿ ಸದಸ್ಯ ಉಮೇಶ್‌ ಶೆಣೈ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next