Advertisement

ವಿನಯ್ ಕುಲಕರ್ಣಿಗೆ ತಿಲಕವಿಟ್ಟು ರಾಖೀ ಕಟ್ಟಿ ಸ್ವಾಗತಿಸಿದ ಶಾಸಕಿ ಹೆಬ್ಬಾಳ್ಕರ್

08:04 PM Aug 22, 2021 | Team Udayavani |

ಬೆಳಗಾವಿ: ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್‌ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಮ್ಮ ಬೆಂಬಲಿಗರೊಂದಿಗೆ ಜೈಲಿನ ಆವರಣಕ್ಕೆ ಬಂದಿದ್ದರು. ಒಂದು ಗಂಟೆಗಳ ಕಾಲ ಕಾಯುತ್ತ ಹೊರ ಭಾಗದಲ್ಲಿ ನಿಂತಿದ್ದರು. ವಿನಯ ಜೈಲಿನಿಂದ ಹೊರ ಬರುತ್ತಲೇ ಹೂಗುತ್ಛ ನೀಡಿ ಹಣೆಗೆ ತಿಲಕವಿಟ್ಟು ಅವರಿಗೆ ರಾಖೀ ಕಟ್ಟಿ ಸ್ವಾಗತಿಸಿದರು.

Advertisement

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಹೆಬ್ಬಾಳ್ಕರ್, “ನನ್ನ ಹಾಗೂ ವಿನಯಣ್ಣನ ಕುಟುಂಬದ ಸಂಬಂಧ ರಾಜಕೀಯೇತರವಾಗಿದೆ. 25 ವರ್ಷಗಳಿಂದಲೂ ಅಣ್ಣ-ತಂಗಿ ನಂಟಿದೆ. ರಕ್ಷಾ ಬಂಧನ ಮುನ್ನಾ ದಿನವೇ ಅಣ್ಣ ಕಾರಾಗೃಹದಿಂದ ಬಿಡುಗಡೆ ಆಗುತ್ತಿದ್ದಾರೆ. ಹೀಗಾಗಿ ನಮಗೆಲ್ಲ ಇದು ಸಂತಸದ ಸುದ್ದಿ. ಅವರು ಬಿಡುಗಡೆ ಆಗುತ್ತಿರುವುದನ್ನು ಕಣ್ತುಂಬಿಕೊಳ್ಳಲು ಸಂತೋಷದಿಂದ ಸ್ವಾಗತಿಸಿಕೊಳ್ಳಲು ಇಲ್ಲಿಗೆ ಬಂದಿದ್ದೇನೆ’ ಎಂದರು.

“ವಿನಯಣ್ಣನ ಜೀವನದಲ್ಲಿ ನಡೆದ ಕಹಿ ಘಟನೆಗಳಿಂದ ಅವರು ಘಾಸಿಯಾಗಿದ್ದಾರೆ. ಅವರ ಕುಟುಂಬ ವರ್ಗದವರಿಗೂ ಬಹಳ ನೋವಾಗಿದೆ. ಈ ಪ್ರಕರಣದಲ್ಲಿ ಅವರು ಗೆದ್ದು ಬರಲಿ ಎಂಬುದಾಗಿ ಹಾರೈಸುತ್ತೇನೆ. ಕಾಂಗ್ರೆಸ್‌ ಪಕ್ಷ ವಿನಯಣ್ಣನ ಜೊತೆಗೆ ಇರುತ್ತದೆ. ಇವರ ಬಿಡುಗಡೆಯಿಂದ ಪಕ್ಷಕ್ಕೆ ಬಹಳ ಅನುಕೂಲ ಆಗಲಿದೆ. ಕೇವಲ ಒಂದು ಕ್ಷೇತ್ರದ ನಾಯಕರಲ್ಲದೇ ರಾಜ್ಯ ಮಟ್ಟದ ಪ್ರಭಾವಿ ನಾಯಕರು. ಉತ್ತರ ಕರ್ನಾಟಕದಲ್ಲಿ ಪ್ರಭಾವಿ ಆಗಿದ್ದಾರೆ’ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next