Advertisement

MLA Channabasappa: ಸೈಟ್‌ ವಾಪಸ್‌ ಕೊಟ್ಟರೆ ಖರ್ಗೆ ಕುಟುಂಬ ಶಿಕ್ಷೆಯಿಂದ ಪಾರಾಗಲ್ಲ

07:33 PM Oct 14, 2024 | Poornashri K |

ಶಿವಮೊಗ್ಗ: ಮಲ್ಲಿಕಾರ್ಜುನ ಖರ್ಗೆ ಹಿರಿಯರು. ಅವರ ಬಗ್ಗೆ ಗೌರವ ಇದೆ. ಕಳ್ಳ ಕದ್ದ ಚಿನ್ನ ವಾಪಸ್‌ ನೀಡಿದ ಮಾತ್ರಕ್ಕೆ ಶಿಕ್ಷೆ ಕಡಿಮೆಯಾಗಲ್ಲ. ಖರ್ಗೆ ಕುಟುಂಬ 5 ಎಕರೆ ಜಮೀನು ವಾಪಸ್‌ ಕೊಟ್ಟಿದ್ದಾರೆ. ಹಾಗಂತ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ. ರಾಜಕೀಯಕ್ಕಾಗಿ ಈಗ ಏನೆನೋ ಮಾತನಾಡುತ್ತಿದ್ದಾರೆ ಎಂದು ಶಾಸಕ ಎಸ್‌.ಎನ್‌. ಚನ್ನಬಸಪ್ಪ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಿಯಾಂಕ್‌ ಖರ್ಗೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಕಾಂಗ್ರೆಸ್‌ ತುಘಲಕ್‌ ನೀತಿ ಅನುಸರಿಸುತ್ತಿದೆ. ಒಬ್ಬರಿಗೆ ಒಂದೊಂದು ನೀತಿ, ಒಂದೊಂದು ಕಾನೂನು. ವಿನಯ ಕುಲಕರ್ಣಿ ವಿರುದ್ಧ ಎಫ್‌ಐಆರ್‌ ಆಗಿದೆ, ಬಂಧನವಾಗಿಲ್ಲ. ಅದೇ ಬಿಜೆಪಿಯವರಾಗಿದ್ದರೆ ಬಂಧನ ಮಾಡುತ್ತಿದ್ದರು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next