Advertisement

ದ.ಕ. ಜಿಲ್ಲಾ ಯುವ ಕಾಂಗ್ರೆಸ್‌: ಹ್ಯಾಟ್ರಿಕ್‌ ಬಾರಿಸಿದ ಮಿಥುನ್‌ ರೈ

12:41 PM May 19, 2017 | Team Udayavani |

ಮಂಗಳೂರು: ದ.ಕ. ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯ ಫಲಿತಾಂಶ ಗುರುವಾರ ಹೊರ ಬಿದ್ದಿದ್ದು, ಉತ್ತಮ ಪೈಪೋಟಿಯ ಬಳಿಕ ಮಿಥುನ್‌ ರೈ ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಮೂರನೇ ಬಾರಿಗೆ ಅವರು ಈ ಸ್ಥಾನವನ್ನು ಅಲಂಕರಿಸಿದಂತಾಗಿದೆ.

Advertisement

ಯುವ ಕಾಂಗ್ರೆಸ್‌ ಚುನಾವಣೆ ಯನ್ನು ಪಾರದರ್ಶಕವಾಗಿ ಕೈಗೊಳ್ಳುವ ನಿಟ್ಟಿನಲ್ಲಿ  ನಡೆದ ಚುನಾವಣೆ ಯಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮಿಥುನ್‌ ರೈ ಅವರ ಪ್ರತಿಸ್ಪರ್ಧಿಯಾಗಿ ಮುಖಂಡ ರಾದ ಲುಕಾ¾ನ್‌, ಸುಮಿತ್‌ ಡೇಸಾ ನಿಂತಿದ್ದರು. ಉತ್ತಮ ಪೈಪೋಟೊಯಿತ್ತಾದರೂ ಕೊನೆಗೆ ಮಿಥುನ್‌ ರೈ 4,059 ಮತಗಳನ್ನು ಪಡೆದು ಕೊಂಡರೆ, ಲುಕಾ¾ನ್‌ 3,476 ಹಾಗೂ ಸುಮಿತ್‌ ಡೇಸಾ 300  ಮತಗಳನ್ನು ಗಳಿಸಿದರು. ನಿಯಮದಂತೆ ಲುಕಾ¾ನ್‌ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

7 ಕ್ಷೇತ್ರಗಳಲ್ಲಿ ಮಿಥುನ್‌ ರೈ
ಬೆಂಬಲಿತರಿಗೆ ಗೆಲುವು

ದ.ಕ. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಲ್ಲಿ ಯುವ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಮಿಥುನ್‌ ರೈ ಬೆಂಬಲಿತ ಅಭ್ಯರ್ಥಿಗಳು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಆದರೆ ಮಂಗಳೂರು (ಉಳ್ಳಾಲ) ಕ್ಷೇತ್ರ ದಲ್ಲಿ ಮಾತ್ರ ಲುಕಾ¾ನ್‌ ಬೆಂಬಲಿತ ಅಭ್ಯರ್ಥಿ ಅಧ್ಯಕ್ಷ ರಾಗಿ ಆಯ್ಕೆಗೊಂಡಿದ್ದಾರೆ. ಈ ಚುನಾವಣಾ ಫಲಿತಾಂಶದಲ್ಲಿ ಪುತ್ತೂರು ಕ್ಷೇತ್ರದಲ್ಲಿ ಮುಹಮ್ಮದ್‌ ತೌಸೀಫ್ 558 ಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ನಿಕಟ ಸ್ಪರ್ಧಿ ಸಲೀಮುದ್ದೀನ್‌ ಆದಂ 188 ಮತಗಳನ್ನು ಗಳಿಸಿದ್ದಾರೆ. ಸುಳ್ಯ ಕ್ಷೇತ್ರದಲ್ಲಿ ಅಬೂಬಕರ್‌ ಸಿದ್ಧಿಕ್‌ ಕೋಕೋ 251 ಮತಗಳೊಂದಿಗೆ ಅಧ್ಯಕ್ಷರಾಗಿ ಆಯ್ಕೆಯಾದರೆ, ಉಮರ್‌ ಸಾಫಿ
ಕೆ. 201 ಮತಗಳನ್ನು ಪಡೆದು ಉಪಾಧ್ಯಕ್ಷರಾಗಿದ್ದಾರೆ.

ಮೂಡ ಬಿದಿರೆ ಕ್ಷೇತ್ರದಲ್ಲಿ ಚಂದ್ರಹಾಸ್‌ ಸನಿಲ್‌ 358 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರೆ, ಸಫ‌ìರಾಜ್‌ ನವಾಝ್ 270 ಮತಗಳನ್ನು ಪಡೆದಿದ್ದಾರೆ. ಬೆಳ್ತಂಗಡಿ ಕ್ಷೇತ್ರದಲ್ಲಿ ಅಭಿನಂದನ್‌ 192 ಮತಗಳೊಂದಿಗೆ ಗೆಲುವು ಕಂಡರೆ, ನಿಕಟ ಪ್ರತಿಸ್ಪರ್ಧಿ ಸಲೀಂ ಕೆ. 136 ಮತಗಳನ್ನು ಗಳಿಸಿದ್ದಾರೆ. ಬಂಟ್ವಾಳ ಕ್ಷೇತ್ರದಲ್ಲಿ ಪ್ರಶಾಂತ್‌ ಕುಲಾಲ್‌ 315 ಮತ ಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆ ಯಾದರೆ, ನಿಕಟ ಪ್ರತಿಸ್ಪರ್ಧಿ ಚಿತ್ತರಂಜನ್‌ ಶೆಟ್ಟಿ 265 ಮತಗಳನ್ನು ಪಡೆದಿದ್ದಾರೆ. 

ಇನ್ನು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ  744 ಮತಗಳೊಂದಿಗೆ  ಗಿರೀಶ್‌ ಆಳ್ವ ಅಧ್ಯಕ್ಷರಾಗಿ ಆಯ್ಕೆಯಾದರೆ, 
ನಿಕಟ ಪ್ರತಿಸ್ಪರ್ಧಿ ಉತ್ತಮ್‌ ಆಳ್ವ 257 ಮತಗಳನ್ನು ‌ಳಿಸಿ ಉಪಾಧ್ಯಕ್ಷ ರಾಗಿ ಆಯ್ಕೆಯಾಗಿದ್ದಾರೆ. ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಮೆರಿಲ್‌ ರೇಗೋ 549 ಮತ ಗಳೊಂದಿಗೆ ಅಧ್ಯಕ್ಷರಾಗಿ ಆಯ್ಕೆ ಗೊಂಡಿದ್ದು, ಅವರ ಪ್ರತಿ ಸ್ಪರ್ಧಿ ರಮಾನಂದ ಪೂಜಾರಿ 463 ಮತಗಳನ್ನು ಗಳಿಸಿದ್ದಾರೆ.  ಮಂಗಳೂರು (ಉಳ್ಳಾಲ) ಕ್ಷೇತ್ರದಲ್ಲಿ ರವೂಫ್ ಸಿ.ಎಂ. 336 ಮತಗಳನ್ನು ಪಡೆದು ಅಧ್ಯಕ್ಷರಾಗಿದ್ದು, ಇಲಿಯಾಸ್‌ ಉಳ್ಳಾಲ 270 ಮತಗಳನ್ನು ಪಡೆದುಕೊಂಡು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ವಿಧಾನಸಭಾ ಕ್ಷೇತ್ರಗಳ ಅಧ್ಯಕ್ಷ ಗಾದಿಗೆ ನಡೆದ ಚುನಾವಣೆಯಲ್ಲಿ ನಿಕಟ ಸ್ಪರ್ಧಿ ಗಳಾಗಿರುವವರು ಉಪಾಧ್ಯಕ್ಷ ರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಝೋನಲ್‌ ಅಧಿಕಾರಿ ಎಸ್‌.ಎನ್‌. ದುಗೇìಶ್‌ ಪಟೇಲ್‌, ಲೋಕಸಭಾ ರಿಟರ್ನಿಂಗ್‌ ಅಧಿಕಾರಿ ಲೋಕೇಶ್‌ ಭಾರದ್ವಾಜ್‌ ಅವರು ಚುನವಣಾ ಫಲಿತಾಂಶ ಪ್ರಕ್ರಿಯೆ ನೆರವೇರಿಸಿದರು.

Advertisement

ಪ್ರಧಾನ ಕಾರ್ಯದರ್ಶಿಗಳಾಗಿ
7 ಮಂದಿ ಆಯ್ಕೆ

ದ.ಕ. ಜಿಲ್ಲಾ ಯುವ ಕಾಂಗ್ರೆಸ್‌ನ ಪ್ರಧಾನ  ಕಾರ್ಯದರ್ಶಿ ಹುದ್ದೆಗೆ ಒಟ್ಟು 15 ಮಂದಿ ಸ್ಪರ್ಧಿಸಿದ್ದು, ಅವರಲ್ಲಿ 7 ಮಂದಿ ಆಯ್ಕೆ ಯಾಗಿದ್ದಾರೆ. ಕಿರಣ್‌  ಬುಡ್ಲೆಗುತ್ತುಸುಳ್ಯ, ಪ್ರಸಾದ್‌ ಮಲ್ಲಿ ಮೂಡುಶೆಡ್ಡೆ, ಸುಹೇಬ್‌ ಸುರತ್ಕಲ್‌, ನವೀದ್‌, ಅಬ್ದುಲ್‌ ಸಮದ್‌, ಶಿಫಲ್‌ ರಾಜ್‌, ವರುಣ್‌ ರಾಜ್‌ ಅಂಬಟ್‌ ಆಯ್ಕೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next