Advertisement

ಬಚೇಂದ್ರಿಪಾಲ್‌ ತಂಡದಿಂದ ಗಂಗಾ ಶುದ್ಧೀಕರಣ: 55 ಟನ್‌ ತ್ಯಾಜ್ಯ ತೆರವು

12:08 PM Nov 01, 2018 | udayavani editorial |

ಜಮ್‌ಶೇದ್‌ಪುರ : ಗಂಗಾ ನದಿ ಶುದ್ಧೀಕರಣಕ್ಕಾಗಿ 40 ಸದಸ್ಯರ ತಂಡದಿಂದ ತಿಂಗಳು ಪೂರ್ತಿ ನಡೆದ ಅಭಿಯಾನದಲ್ಲಿ 55 ಟನ್‌ ಮೀರಿದ ತ್ಯಾಜ್ಯ ಮತ್ತು ಕಸವನ್ನು ತೆಗೆಯಲಾಯಿತು ಎಂದು ತಂಡದ ನಾಯಕಿಯಾಗಿರುವ ಎವರೆಸ್ಟ್‌ ಪರ್ವತಾರೋಹಣ ಸಾಧಕಿ ಬಚೇಂದ್ರಿ ಪಾಲ್‌ ತಿಳಿಸಿದ್ದಾರೆ.

Advertisement

ಹರಿದ್ವಾರದಿಂದ ಪಟ್ನಾ ವರೆಗಿನ 1,500 ಕಿ.ಮೀ. ಗಳ  “ಗಂಗಾ ಶುದ್ಧೀಕರಣ ಅಭಿಯಾನ’ದ ಉದ್ದಕ್ಕೂ ತಮ್ಮ ತಂಡ ಗಂಗಾ ನದಿಯಲ್ಲಿ ಕೊಳೆತು ನಾರುತ್ತಿದ್ದ  ಅಪಾರ ಪ್ರಮಾಣದ ತ್ಯಾಜ್ಯ, ಕಸವನ್ನು ಕಂಡಿತು ಎಂದು ಬಚೇಂದ್ರಿಪಾಲ್‌ ಹೇಳಿದರು. 

ಬಚೇಂದ್ರಿಪಾಲ್‌ ತಂಡ ಕಳೆದ ಅಕ್ಟೋಬರ್‌ 5ರಂದು ಹರಿದ್ವಾರದಿಂದ “ಗಂಗಾ ಶುದ್ಧಿ ಅಭಿಯಾನ’ ಆರಂಭಿಸಿತ್ತು. ಬಚೇಂದ್ರಿಪಾಲ್‌ ಅವರು 1984ರಲ್ಲಿ ಎವರೆಸ್‌ ಪರ್ವತ ಏರಿದ ದೇಶದ ಮೊದಲ ಭಾರತೀಯ ಮಹಿಳೆ ಎಂಬ ಖ್ಯಾತಿ ಪಡೆದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next