Advertisement

Koppala; ತುಂಗಭದ್ರಾ ಡ್ಯಾಂನಲ್ಲಿ 2019 ರಲ್ಲಿ ಸಂಭವಿಸಿತ್ತು ಅವಘಡ

01:26 PM Aug 11, 2024 | Team Udayavani |

ಕೊಪ್ಪಳ: ತುಂಗಭದ್ರಾ ಜಲಾಶಯದ 19ನೇ ಗೇಟ್ ಚೈನ್ ಲಿಂಕ್ ಕಟ್ ಆಗಿರುವ ಪ್ರಕರಣ ಜಲಾಶಯದ ಇತಿಹಾಸದ ಮೊದಲ ಬಹುದೊಡ್ಡ ಪ್ರಕರಣ ಇದಾಗಿದ್ದರೂ, ಐದು ವರ್ಷಗಳ ಹಿಂದೆ ಲಘು ದುರಂತವೊಂದು ಸಂಭವಿಸಿತ್ತು.

Advertisement

ಅಂದು 2019 ರಲ್ಲಿ ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಯ (ಮುನಿರಾಬಾದ್) ಬಳಿ ಗೇಟ್ ಮುರಿದಿತ್ತು. ಹಾಗಲೂ ಸಹಿತ ನಾಲ್ಕು ದಿನಗಳ ಕಾಲ ಅಪಾರ ಪ್ರಮಾಣದ ನೀರು ಹರಿದು ಹೋಗಿತ್ತು. ಅಂದು ವಿವಿಧ ತಜ್ಞರ ತಂಡ ಸ್ಥಳಕ್ಕೆ ದೌಡಾಯಿಸಿ, ಪರಿಶೀಲನೆ ನಡೆಸಿ, ವಾರಗಳ ಕಾಲ ರಿಪೇರಿಗೆ ಹರಸಾಹಸ ಪಟ್ಟಿದ್ದರು.

ಆ ಬಳಿಕ ಆರ್ ಕೆ ಮೆಡಿಕ್ ಮೆಥಾಡಲಿಜಿ ಬಳಸಿ ಈ ಹಿಂದಿನ ನೀರಾವರಿ ನಿಗಮದ ಎಂಡಿಯಾಗಿದ್ದ ಮಲ್ಲಿಕಾರ್ಜುನ ಗುಂಗೆ ಅವರ ಸತತ ಪ್ರಯತ್ನದಿಂದ ಬೃಹದಾಕಾರದ ಮರಳಿನ ಮೂಟೆ ಮೂಲಕ ಮುರಿದ ಗೇಟಿನ ಸ್ಥಳಕ್ಕೆ ಬೃಹತ್ ಕ್ರೇನ್ ಗಳ ಮೂಲಕ ಇಳಿ ಬಿಟ್ಟು ನೀರಿನ ಹರಿವು ತಡೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next