Advertisement

ಶಿರಡಿ ಸಾಯಿಬಾಬಾ ಪವಾಡ! ಏನಿದು ಹುಣಸೂರಿನ ಬಾಬಾ ಮಂದಿರದ ಕೌತುಕ

04:08 PM Feb 28, 2017 | Sharanya Alva |

ಹುಣಸೂರು(ಮೈಸೂರು): ಗಣಪತಿ ಹಾಲು ಕುಡಿದ, ಯೇಸು ಕಣ್ಣಲ್ಲಿ ರಕ್ತ ಸುರಿಯುತ್ತಿದೆ, ಆ ಮೂರ್ತಿಯಿಂದ ವಿಭೂತಿ ಬರುತ್ತಿದೆ…ಹೀಗೆ ಆಗಾಗ ಇಂತಹ ಪವಾಡಗಳ ಸುದ್ದಿ ಹರಿದಾಡುತ್ತಿರುತ್ತದೆ…ಇದೀಗ ಅದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಹುಣಸೂರು ಪಟ್ಟಣದಲ್ಲಿರುವ ಸಾಯಿಬಾಬಾ ಮಂದಿರದಲ್ಲಿನ ಸಿಸಿಟಿವಿಯಲ್ಲಿ ಸೆರೆಯಾದ ವಿಸ್ಮಯ ಮೂಡಿಸುವ ದೃಶ್ಯವೊಂದು ಭಕ್ತರನ್ನು ಅಚ್ಚರಿಗೆ ತಳ್ಳಿದೆ.

Advertisement

ಇಲ್ಲಿನ ಹಳೇ ಬಿಎಂ ರಸ್ತೆಯಲ್ಲಿರುವ ಶಿರಡಿ ಸಾಯಿಬಾಬಾ ಮಂದಿರದಲ್ಲಿ, ಶಿರಡಿ ಸಾಯಿ ಅವರು ಬೆಳಕಿನ ರೂಪದಲ್ಲಿ ಗೋಚರಿಸಿರುವ ಆಕೃತಿ ಸಿಸಿಟಿವಿಯಲ್ಲಿ ಸೆರೆಯಾಗಿದೆ!

ಈ ದೃಶ್ಯ ಕೇವಲ 15 ಸೆಕೆಂಡ್ ಗಳ ಇದ್ದು, ಸಾಯಿ ಬೆಳಕಿನ ರೂಪದಲ್ಲಿ ಗೋಚರಿಸಿದ್ದು ಯಾವ ಭಕ್ತರಿಗೂ ಕಾಣಿಸಿಲ್ಲ. ಆದರೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದು ಸಾಯಿ ಪವಾಡ ಎಂದು ಸುದ್ದಿ ಹರಿದಾಡತೊಡಗಿದೆ.

ಸಾಯಿ ಪವಾಡದ ಈ ದೃಶ್ಯವೀಗ ಎಲ್ಲೆಡೆ ಕಾಳ್ಗಿಚ್ಚಿನಂತೆ ಹರಿದಾಡುತ್ತಿದೆ. ಇದು ಸ್ವತಃ ಸಾಯಿಬಾಬಾ ಅವರ ಪವಾಡ ಎಂದೇ ಭಕ್ತರು ಸುದ್ದಿ ಹಬ್ಬಿಸತೊಡಗಿದ್ದಾರೆ ಎಂದು ಮಾಧ್ಯಮದ ವರದಿಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next