Advertisement

ಬೆಂಗಳೂರು- ದೆಹಲಿ ರಾಜಧಾನಿ ಎಕ್ಸ್ ಪ್ರೆಸ್ ರೈಲಿನಲ್ಲಿ ಅಗ್ನಿ ಅವಘಡ

09:00 AM Jan 04, 2021 | Team Udayavani |

ತೆಲಂಗಾಣ: ದೆಹಲಿ- ಬೆಂಗಳೂರು ಎಕ್ಸ್ ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದೃಷ್ಟಶವಾತ್ ಯಾವುದೇ ಅನಾಹುತ ನಡೆದಿಲ್ಲ.

Advertisement

ರವಿವಾರ ರಾತ್ರಿ ಈ ಘಟನೆ ನಡೆದಿದ್ದು, ತೆಲಂಗಾಣದ ವಿಕಾರಬಾದ್ ಜಿಲ್ಲೆಯಲ್ಲಿ ರೈಲು ಆಗಮಿಸುತ್ತಿದ್ದಾಗ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಲೋಕೋಮೋಟಿವ್ ನಲ್ಲಿ ಹೊಗೆ ಕಾಣಿಸಿಕೊಂಡ ಕೂಡಲೇ ಲೋಕೊಪೈಲಟ್ ರೈಲನ್ನು ನಿಲ್ಲಿಸಿ ಮುಂಜಾಗೃತೆ ಕೈಗೊಂಡರು ಎಂದು ವರದಿಯಾಗಿದೆ.

ಇದನ್ನೂ ಓದಿ:ಪಾಕ್‌ನಲ್ಲಿ ಡಿಡಿ, ಆಕಾಶವಾಣಿ ಡಿಜಿಟಲ್‌ ಚಾನೆಲ್‌ಗೆ ಹೆಚ್ಚು ಮೆಚ್ಚುಗೆ

ಸಣ್ಣ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಅದು ಎಂಜಿನ್‌ ನ ಸ್ವಲ್ಪ ಪ್ರಮಾಣ ಆವರಿಸಿತ್ತು. ಕೂಡಲೇ ಬೋಗಿಗಳಿಂದ ಎಂಜಿನ್‌ ಅನ್ನು ಬೇರ್ಪಡಿಸಿದ್ದಾರೆ ಎಂದು ದಕ್ಷಿಣ ಕೇಂದ್ರ ರೈಲ್ವೆಯ ಅಧಿಕಾರಿ ಸಿ.ಎಚ್. ರಾಕೇಶ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next