Advertisement

ಹತ್ತೂಂಬತ್ತನೇ ಗಣರಾಜ್ಯೋತ್ಸವಎಂದ ತುಕಾರಾಂ

12:30 AM Jan 27, 2019 | Team Udayavani |

ಬಳ್ಳಾರಿ: ದೇಶದೆಲ್ಲೆಡೆ 70ನೇ ಗಣರಾಜ್ಯೋತ್ಸವ ಆಚರಣೆ ಮಾಡಿದರೆ ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಈ ತುಕಾರಾಂ ಅವರು ಮಾತ್ರ 19ನೇ ಗಣರಾಜ್ಯೋತ್ಸವ ಎಂದು ಹೇಳುವ ಮೂಲಕ ಮುಜುಗರಕ್ಕೀಡಾಗಿದ್ದಾರೆ.

Advertisement

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಮೊದಲ ಬಾರಿಗೆ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದ ಸಚಿವರು,ಭಾಷಣದ ವೇಳೆ 19ನೇ ಗಣರಾಜ್ಯೋತ್ಸವ ಎಂದರು. ಸಿದ್ಧ ಭಾಷಣದ ಪ್ರತಿಯನ್ನು ಓದುತ್ತಿದ್ದ ಸಚಿವ ತುಕಾರಾಂ, ಭಾರತ ದೇಶ ಗಣರಾಜ್ಯವಾಗಿ 69ನೇ ವರ್ಷ ಪೂರ್ಣಗೊಂಡಿದ್ದು, 70ನೇ ವರ್ಷದ ಗಣರಾಜ್ಯೋತ್ಸವವನ್ನು ನಾವಿಂದು ಆಚರಿಸುತ್ತಿದ್ದೇವೆ ಎನ್ನಬೇಕಿತ್ತು. ಆದರೆ,
ತುಕಾರಾಂ ಅವರು, ಭಾರತ ಗಣರಾಜ್ಯವಾಗಿ 19 ವರ್ಷ ಪೂರ್ಣಗೊಂಡಿದ್ದು, 70ನೇ ವರ್ಷದ ಗಣರಾಜ್ಯೋತ್ಸವವನ್ನು ನಾವಿಂದು ಆಚರಿಸುತ್ತಿದ್ದೇವೆ ಎನ್ನುವ ಮೂಲಕ ಮುಜುಗರಕ್ಕೀಡಾದರು.

Advertisement

Udayavani is now on Telegram. Click here to join our channel and stay updated with the latest news.

Next