Advertisement

ಚಿಕ್ಕಮಗಳೂರಿನ‌ ನಕ್ಸಲ್ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್

04:15 PM Aug 04, 2020 | keerthan |

ಚಿಕ್ಕಮಗಳೂರು: ಚಿಕ್ಕಮಗಳೂರಿನ‌ ಮಲೆನಾಡು, ನಕ್ಸಲ್ ಪೀಡಿತ ಪ್ರದೇಶಕ್ಕೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಇಂದು ಭೇಟಿ ನೀಡಿದರು. ಇಲ್ಲಿನ ವಿದ್ಯಾರ್ಥಿಗಳ ಜೊತೆ ಸಚಿವರು ಸಂವಾದ ನಡೆಸಿದರು.

Advertisement

ಕಳೆದ ಎರಡು ದಿನದ ಹಿಂದೆ ಎಸ್ಎಸ್ಎಲ್ ಸಿ ವಿದ್ಯಾರ್ಥಿಯೋರ್ವ ಆಡಿಯೋ ಮೂಲಕ ಆನ್ ಲೈನ್ ಶಿಕ್ಷಣದ ಬಗ್ಗೆ ಅಳಲು ತೋಡಿಕೊಂಡಿದ್ದ. ಈ ಕಾರಣದಿಂದ ಸಚಿವರು ಜಿಲ್ಲೆಯ ಭೈರೇದೇವರು, ಕಿತ್ಲೇಗುಳಿ, ಹೊರಳೆ, ಮೆಣಸಿನ ಹಾಡ್ಯ ಗ್ರಾಮಗಳಿಗೆ ಭೇಟಿ ನೀಡಿ ಹಲವು ಸಮಸ್ಯೆಗಳ ಬಗ್ಗೆ ಚರ್ಚಿಸಿದರು.

ತಮ್ಮ ಊರಿಗೆ ಬಂದ ಸಚಿವರ ಮುಂದೆ ಮಲೆನಾಡಿನ‌ ಹಲವು ಸಮಸ್ಯೆಗಳ‌ ಬಗ್ಗೆ ವಿದ್ಯಾರ್ಥಿಗಳು ಅಳಲು ತೋಡಿಕೊಂಡರು. ಎಲ್ಲರ ಮಾತುಕತೆಗಳನ್ನು ಆಲಿಸಿದ ಸಚಿವರು ಶೀಘ್ರ ಸಮಸ್ಯೆ ಬಗೆಹರಿಸುವ ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next