Advertisement

ಸಾಕಾನೆಗಳಿಗೆ ಆಹಾರ ಉಣಿಸಿದ ಸಚಿವ ಸುರೇಶ್‌ಕುಮಾರ್

10:20 PM Mar 26, 2021 | Team Udayavani |

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಕಲ್ಕೆರೆಯ ಐನೂರು ಮಾರಿಗುಡಿ ವಲಯದಲ್ಲಿರುವ ರಾಮಾಪುರ ಸಾಕಾನೆ ಶಿಬಿರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್‌ಕುಮಾರ್ ಶುಕ್ರವಾರ ಸಂಜೆ ಭೇಟಿ ನೀಡಿದ್ದರು.

Advertisement

ರಾಮಾಪುರ ಸಾಕಾನೆ ಶಿಬಿರದಲ್ಲಿ ಒಟ್ಟು 13 ಆನೆಗಳಿವೆ. ಸಚಿವರು ಭೇಟಿ ನೀಡಿದ ಸಮಯ ಆನೆಗಳಿಗೆ ಊಟ ನೀಡುವ ಸಮಯವಾಗಿತ್ತು. ರಾಗಿ,ಹುರಳಿ, ಅಕ್ಕಿ ಸೇರಿಸಿ ಬೇಯಿಸಿದ ಮುದ್ದೆಯನ್ನು ಆನೆಗಳಿಗೆ ಆಹಾರವಾಗಿ ನೀಡಲಾಗುತ್ತದೆ. ಸಚಿವರು ಭೇಟಿ ನೀಡಿದ ಸಮಯ ಆನೆಗಳಿಗೆ ಆಹಾರ ನೀಡುವ ಸಮಯವಾಗಿದ್ದರಿಂದ ಸಿಬ್ಬಂದಿ ಜೊತೆಗೂಡಿ ಸಚಿವರು ಆನೆಗಳಿಗೆ ಆಹಾರ ತಿನ್ನಿಸಿದರು.

ಈ ಸಂದರ್ಭದಲ್ಲಿ ಶಾಸಕ ಸಿ.ಎಸ್. ನಿರಂಜನಕುಮಾರ್ ಸಚಿವರೊಂದಿಗೆ ಇದ್ದರು.

ಇದನ್ನೂ ಓದಿ :ಮುಸ್ಲಿಮರನ್ನು ಮತಗಳಾಗಿ ನೋಡುವುದು ಕಾಂಗ್ರೆಸ್‌ನ ಐತಿಹಾಸಿಕ ದುರಭ್ಯಾಸ : HDK

Advertisement

Udayavani is now on Telegram. Click here to join our channel and stay updated with the latest news.

Next