Advertisement

ಅಪಘಾತದ ಗಾಯಾಳುವಿಗೆ ಕಾರು ನೀಡಿ ಬೈಕಲ್ಲಿ ತೆರಳಿದ ಸಚಿವ ಸುನಿಲ್‌

10:50 AM Oct 16, 2022 | Team Udayavani |

ಕಾರ್ಕಳ : ಸಚಿವ ವಿ. ಸುನಿಲ್‌ಕುಮಾರ್‌ ಪ್ರಯಾಣಿಸುತ್ತಿದ್ದ ವೇಳೆ ದಾರಿ ಮಧ್ಯೆ ಅಪಘಾತವೊಂದು ಸಂಭವಿಸಿ ಗಾಯಗೊಂಡಿದ್ದ ಯುವಕ ನೋರ್ವನನ್ನು ಆಸ್ಪತ್ರೆಗೆ ಸಾಗಿಸಲು ತನ್ನ ಕಾರು ಬಿಟ್ಟುಕೊಟ್ಟು ಬೈಕ್‌ ಏರಿ ತೆರಳಿ ಮಾನವೀಯತೆ ತೋರಿದ್ದಾರೆ.

Advertisement

ಶನಿವಾರ ಉಡುಪಿಯಲ್ಲಿ ಕಾರ್ಯ ಕ್ರಮ ಮುಗಿಸಿ ಕಾರ್ಕಳದ ಕಡೆಗೆ ಸಚಿವರು ತೆರಳುತಿದ್ದ ವೇಳೆ ಗುಂಡಡ್ಕ ಸರ್ಕಲ್‌ ಬಳಿ ಕಾರು ಮತ್ತು ಬೈಕ್‌ ಅಪಘಾತ ಸಂಭವಿಸಿ ಯುವಕನೋರ್ವ ಗಂಭೀರ ಗಾಯಗೊಂಡು ರಕ್ತ ಸೋರುತ್ತ ಬಿದ್ದಿರುವುದನ್ನು ಗಮನಿಸಿದರು. ತತ್‌ಕ್ಷಣವೇ ಚಾಲಕನಿಗೆ ಕಾರನ್ನು ನಿಲ್ಲಿಸುವಂತೆ ಸೂಚಿಸಿ ಗಾಯಾಳುವಿನ ಬಳಿ ತೆರಳಿ ಸಾಂತ್ವನ ಹೇಳಿದ ಆತನನ್ನು ಆಸ್ಪತ್ರೆಗೊಯ್ಯಲು ತನ್ನ ಕಾರು ನೀಡಿದರು.

ಬಳಿಕ ದ್ವಿಚಕ್ರ ವಾಹನದಲ್ಲಿ ತಮ್ಮ ನಿವಾಸಕ್ಕೆ ತೆರಳಿದರು. ಸಚಿವರ ಗನ್‌ಮ್ಯಾನ್‌ ಪ್ರಭಾಕರ, ಸ್ಥಳೀಯ ಯುವಕ ವಿನಯ್‌ ಮತ್ತು ಕಾರು ಚಾಲಕ ಮಂಜುನಾಥ ಗಾಯಾಳುವನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದರು.

ಇದನ್ನೂ ಓದಿ : ಉಡುಪಿ ಜಿಲ್ಲೆಯಲ್ಲಿ ಚರ್ಮಗಂಟು ಸೋಂಕು ದೃಢಪಟ್ಟಿಲ್ಲ: ಪಶು ಸಂಗೋಪನೆ ಇಲಾಖೆ ಸ್ಪಷ್ಟನೆ

Advertisement

Udayavani is now on Telegram. Click here to join our channel and stay updated with the latest news.

Next