Advertisement

Priyanka Kharge: ಬಿಜೆಪಿ ನಾಯಕರು ಹಾಸನಕ್ಕೆ ಏಕೆ ಕಾಲಿಡುತ್ತಿಲ್ಲ; ಪ್ರಿಯಾಂಕ್‌ ಪ್ರಶ್ನೆ

08:34 PM May 16, 2024 | Team Udayavani |

ಬೆಂಗಳೂರು: ಹುಬ್ಬಳ್ಳಿಯ ನೇಹಾ ಪ್ರಕರಣದಲ್ಲಿ ಸಂತ್ರಸ್ತರ ಮನೆಗೆ ಹೋಗಿ ಭೇಟಿ ನೀಡುವ ಬಿಜೆಪಿ ನಾಯಕರು, ಹಾಸನಕ್ಕೆ ಏಕೆ ಕಾಲಿಡುತ್ತಿಲ್ಲ? ಅಲ್ಲಿ ಕಾಲಿಟ್ಟರೆ, ಕಲ್ಲಲ್ಲಿ ಹೊಡೆಯುತ್ತಾರೆ ಅಂತ ಭಯವೇ? ಎಂದು ಸಚಿವ ಪ್ರಿಯಾಂಕ ಖರ್ಗೆ ತೀಕ್ಷ್ಣವಾಗಿ ಕೇಳಿದರು.

Advertisement

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹುಬ್ಬಳ್ಳಿ ಪ್ರಕರಣದಲ್ಲಿ ಇರುವ ಆಸಕ್ತಿ ಹಾಸನದ ಪ್ರಕರಣದಲ್ಲಿ ಯಾಕಿಲ್ಲ? ವಿಜಯೇಂದ್ರ ಎಲ್ಲಿದ್ದಾರೆ? ನಾಪತ್ತೆ ಆಗಿದ್ದೀರಾ? ಅಶೋಕಣ್ಣ ನೀವೆಲ್ಲಿ ಗಾಯಬ್‌ ಆಗಿದ್ದೀರಾ?  ಮಾತೆತ್ತಿದರೆ ಮಹಾ ನಾಯಕರು ತಿಮಿಂಗಿಲ ಅಂತೀದ್ದೀರಿ. ಯಾಕೆ ನಿಮ್ಮ ಜೆಡಿಎಸ್‌ ಮೈತ್ರಿ ಬಗ್ಗೆ ಮಾತನಾಡುತ್ತಿಲ್ಲ? ಹುಬ್ಬಳ್ಳಿಯ ಅಂಜಲಿ ಕೊಲೆ ಪ್ರಕರಣವನ್ನು ಬಿಜೆಪಿ ಯಾಕೆ ದೊಡ್ಡ ಮಟ್ಟದಲ್ಲಿ ತೆಗೆದುಕೊಳ್ಳುತ್ತಿಲ್ಲ? ಮಡಿಕೇರಿ, ಹಾಸನ ಪ್ರಕರಣದ ಬಗ್ಗೆ ಯಾಕೆ ಮಾತನಾಡುತ್ತಿಲ್ಲ? ರಾಜಕೀಯ ಲಾಭ ಎಲ್ಲಿದೆ ಅಲ್ಲಿ ಮಾತ್ರ ಮಾಡುತ್ತೀರಾ? ಎಂದು ಕೆಣಕಿದ್ದಾರೆ. ಬಿಜೆಪಿಯವರೇ ಕ್ರಿಮಿನಲ್‌ಗ‌ಳು ಆಗಿದ್ದು, ಅವರಿಂದಲೇ ರಾಜ್ಯದಲ್ಲಿ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿವೆ ಎಂದು ಪ್ರಿಯಾಂಕ ಖರ್ಗೆ ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next