Advertisement

ವೈಮಾನಿಕ ದಾಳಿಗೆ ಸಚಿವ ಮನಗೂಳಿ ಮೃಧು ಧೋರಣೆ

12:25 AM Feb 28, 2019 | Team Udayavani |

ಬಾಗಲಕೋಟೆ: ಪಾಕ್‌ ಉಗ್ರರ ಹುಟ್ಟಡಗಿಸಿದ ಭಾರತೀಯ ಸೈನಿಕರ ಪರಾಕ್ರಮಕ್ಕೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದ್ದರೆ ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿ ಮಾತ್ರ “ಉಗ್ರರ ಅಡಗು ತಾಣಗಳ ಮೇಲೆ ದಾಳಿ ನಡೆಸಿ 300ಕ್ಕೂ ಹೆಚ್ಚು ಭಯೋತ್ಪಾದಕರ ಹತ್ಯೆ ಮಾಡಿರುವುದು ಸರಿಯಲ್ಲ’ ಎಂದು ಮೃಧು ಧೋರಣೆ ತೋರಿದ್ದಾರೆ.

Advertisement

ತೋಟಗಾರಿಕೆ ವಿವಿ ಘಟಿಕೋತ್ಸವದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸೈನಿಕರೇ ಆಗಲಿ, ಉಗ್ರರೇ ಆಗಲಿ. ಬಾಂಬ್‌ ದಾಳಿ ಮಾಡಬಾರದು. ವೈಮಾನಿಕ ದಾಳಿ ನಡೆಯಬಾರದಿತ್ತು. ನಡೆದು ಹೋಗಿದೆ. ಇವರ ಮೇಲೆ ಅವರು, ಅವರ ಮೇಲೆ ಇವರು ಬಾಂಬ್‌ ಹಾಕಬಾರದಿತ್ತು ಎಂದರು. ಮರು ಪ್ರಶ್ನೆ ಮಾಡಿದಾಗಲೂ ಮತ್ತೆ ಅದನ್ನೇ ಪುನರುಚ್ಚರಿಸಿದರು.

ಗಂಟೆಯಲ್ಲೇ ಉಲ್ಟಾ: ಸಚಿವರ ಹೇಳಿಕೆ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಮನಗೂಳಿ ಅವರು, ಘಟಿಕೋತ್ಸವದ ಬಳಿಕ ಮಾತನಾಡಿ, ಮಾಧ್ಯಮದವರ ಪ್ರಶ್ನಾವಳಿ ನನಗೆ ಅರ್ಥವಾಗಲಿಲ್ಲ. ನಾನು ವಾಹ ನದಲ್ಲಿ ಕುಳಿತಿದ್ದೆ. ಪ್ರಶ್ನೆ ಸರಿಯಾಗಿ ಕೇಳಿಸದೇಅರ್ಥವಾಗಿರಲಿಲ್ಲ. ಹೀಗಾಗಿ ಈ ಘಟನೆ ನಡೆಯಬಾರದಿತ್ತು ಎಂದಿದ್ದೆ. ಪುಲ್ವಾಮಾದಲ್ಲಿ ಉಗ್ರರು ಭಾರತೀಯ ಸೈನಿಕರ ಮೇಲೆ ನಡೆಸಿದ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇನೆ. ಇದಕ್ಕೆ ಭಾರತೀಯ ಸೈನಿಕರು ಪ್ರತ್ಯುತ್ತರ ನೀಡಿದ್ದಾರೆ. ದೇಶದ ಸಣ್ಣ ಮಕ್ಕಳು ಉಗ್ರರ ಕೃತ್ಯ ಖಂಡಿಸುರುವಾಗ ನಾನು ಹೇಗೆ ಮೃದು ಧೋರಣೆ ತಾಳಲು ಸಾಧ್ಯ ಎಂದು ಅಚಾತುರ್ಯಕ್ಕೆ ಕ್ಷಮಾಪಣೆ ಕೇಳಿದರು

Advertisement

Udayavani is now on Telegram. Click here to join our channel and stay updated with the latest news.

Next