Advertisement

ಅಸಾದುದ್ದೀನ್  ಓವೈಸಿಯದ್ದು ಹಿಂದೂ ವಿರೋಧಿ ರಕ್ತ: ಸಚಿವ ಈಶ್ವರಪ್ಪ ವಾಗ್ದಾಳಿ

01:58 PM Aug 11, 2020 | keerthan |

ಶಿವಮೊಗ್ಗ: ಸಂಸದ ಅಸಾದುದ್ದೀನ್ ಓವೈಸಿಯವರದ್ದು ಹಿಂದೂ ವಿರೋಧಿ ರಕ್ತ. ಅವರಿಗೆ ಹಿಂದೂ ಶ್ರದ್ಧಾ ಕೇಂದ್ರಗಳ ಬಗ್ಗೆ ಅವರಿಗೆ ಉತ್ತಮ ಭಾವನೆ ಇಲ್ಲ ಎಂದು ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.

Advertisement

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ನನ್ನ ಹೇಳಿಕೆಯನ್ನು ಅಸಾದುದ್ದೀನ್ ಓವೈಸಿ ರಾಜಕೀಯವಾಗಿ ತಿರುಗಿಸಿದ್ದಾರೆ. ಈಶ್ವರಪ್ಪ ಆರ್ ಎಸ್ ಎಸ್ ಪ್ರೇರಣೆಯಂತೆ ಹೇಳಿಕೆ ನೀಡಿದ್ದಾರೆ ಎಂದು ಹೇಳಿದ್ದಾರೆ. ಮುಂದೆ ಧರ್ಮ ಸಂಸತ್ ಹಾಗೂ ಬಿಜೆಪಿಯಲ್ಲೂ ಈ ಬಗ್ಗೆ ನಿರ್ಣಯವಾಗುತ್ತದೆ ಎಂದಿದ್ದಾರೆ.  ನಾನು ಈ ದೇಶದ ಮಣ್ಣಿನ ಮಗ. ಸ್ವಾತಂತ್ರ್ಯ ಭಾರತದಲ್ಲಿದ್ದು, ನನ್ನ ಭಾವನೆ ಹೇಳಿದ್ದೇನೆ ಎಂದು ಈಶ್ವರಪ್ಪ ತಿರುಗೇಟು ನೀಡಿದರು.

ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಶಿಲಾನ್ಯಾಸ ಮಾಡಿದ್ದಕ್ಕೆ ದೇಶವೇ ಸಂತಸಪಟ್ಟಿದೆ. ಅ ದಿನದಂದೂ ನನ್ನ ಮನಸ್ಸಿನ ಭಾವನೆಗಳನ್ನು ನಿಮ್ಮ ಮುಂದೆ ಹಂಚಿಕೊಂಡಿದೆ. ಕಾಶಿಗೆ ಹೋದಾಗ ವಿಶ್ವನಾಥನ ಹಾಗೂ ಮಥುರಾಕ್ಕೆ ಹೋದಾಗ ಕೃಷ್ಣನ ದೇವಾಲಯ ಒಡೆದು ಮಸೀದಿ ಕಟ್ಟಿದ್ದನ್ನು ನೋಡಿದ್ದೇನೆ. ಅದಕ್ಕೆ ನನ್ನ ಮನಸ್ಸಿಗೆ ನೋವಾಯ್ತು. ಹಾಗೇ ಆಕ್ರೋಶವು ಸಹ ಬಂತು ಎಂದಿದ್ದಾರೆ.

ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಅದು ಕಟ್ಟಡ, ರಸ್ತೆ, ಚರಂಡಿ ನಿರ್ಮಾಣಕ್ಕೆ ಅಷ್ಟೇ ಅಲ್ಲ. ಮನಮ್ಮ ಸ್ವಾಭಿಮಾನದ ಶ್ರದ್ಧಾ ಕೇಂದ್ರಗಳಿಗೆ ಮುಕ್ತಿ ಸಿಗಬೇಕು. ಆಗ ಮಾತ್ರ ಸ್ವಾತಂತ್ರ್ಯ ಸಿಕ್ಕಂತೆ. ಕಾಶಿ ಹಾಗೂ ಮಥುರಾದಲ್ಲಿ ಮುಕ್ತವಾದ ಮಂದಿರವನ್ನು ನಿರ್ಮಾಣವಾಗಬೇಕು ಎಂಬುದು ನನ್ನ ಭಾವನೆ. ಅದೇ ಕಾರಣಕ್ಕೆ ನನ್ನ ಭಾವನೆಯನ್ನು ನಾನು ಬಹಿರಂಗವಾಗಿ ವ್ಯಕ್ತಪಡಿಸಿದ್ದೇನೆ ಎಂದು ಈಶ್ವರಪ್ಪ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next