Advertisement

ಸಾ.ರಾ.ಮಹೇಶ್‌ಗೆ ಸಚಿವ ಸ್ಥಾನ ನೀಡಿ

02:03 PM May 23, 2018 | |

ಭೇರ್ಯ: ಸತತವಾಗಿ ಮೂರು ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಹ್ಯಾಟ್ರಿಕ್‌ ಸಾಧಿಸಿರುವ ಕೆ.ಆರ್‌.ನಗರದ ಶಾಸಕ ಸಾ.ರಾ.ಮಹೇಶ್‌ಗೆ ಸಚಿವ ಸ್ಥಾನ ನೀಡಬೇಕೆಂದು ಗ್ರಾಪಂ ಅಧ್ಯಕ್ಷ ಬಿ.ವೈ.ಶಿವಶಂಕರ್‌ ಹಾಗೂ ಹೊಸ ಅಗ್ರಹಾರ ಹೋಬಳಿ ಜೆಡಿಎಸ್‌ ಯುವ ಜೆಡಿಎಸ್‌ ಅಧ್ಯಕ್ಷ ಚಿದಂಬರ ನಾಯಕ ಒತ್ತಾಯಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2008ರ ವಿಧಾನಸಭಾ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ಜೆಡಿಎಸ್‌ನಿಂದ ಶಾಸಕ ಸಾ.ರಾ.ಮಹೇಶ್‌ ಒಬ್ಬರೇ ಶಾಸಕರಾಗಿ ಆಯ್ಕೆಯಾಗಿ, ಜೆಡಿಎಸ್‌ ಕಾರ್ಯಕರ್ತರ ಏಳಿಗೆಗಾಗಿ ಶ್ರಮಿಸಿದ್ದಲ್ಲದೆ, ಸ್ವಂತ ಹಣದಲ್ಲಿ ಜನರ ಕುಂದು ಕೊರತೆಗಳಿಗೆ ಸ್ಪಂದಿಸಿದ್ದಾರೆ. ಮೈಸೂರು ನಗರ ಸೇರಿದಂತೆ ಚಾಮರಾಜನಗರ ಜಿಲ್ಲೆಯಲ್ಲಿಯೂ ಜೆಡಿಎಸ್‌ ಪ್ರಾಬಲ್ಯವಾಗಲು ಸದಾ ಸ್ಪಂದಿಸಿದ್ದಾರೆ ಎಂದರು.

2013ರ ಚುನಾವಣೆಯಲ್ಲಿ ಗೆಲುವು ಸಾಧಿಸಿ ಜಿಲ್ಲೆ ಮತ್ತು ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸಿದ್ದು, ಮೈಸೂರು ನಗರ ಪಾಲಿಕೆ ಹಾಗೂ ಜಿಪಂನಲ್ಲಿಯೂ ಜೆಡಿಎಸ್‌ ಅಧಿಕಾರ ಹಿಡಿಯುವಂತೆ ಶ್ರಮಿಸಿರುವ ಏಕೈಕ ಶಾಸಕರಾಗಿದ್ದಾರೆ. ಇವರಿಗೆ ಸಚಿವ ಸ್ಥಾನ ನೀಡಬೇಕೆಂದು ನಿಯೋಜಿತ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಜೆಡಿಎಸ್‌ ವರಿಷ್ಠ ದೇವೇಗೌಡರನ್ನು ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್‌ ಯುವ ಮುಖಂಡರಾದ ಗೌತಮ್‌, ಭೇರ್ಯ ಸೋಮು ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next