Advertisement

ಕಾರ್ಯಕರ್ತರಿಗೆ ಎಂದೂ ಅಧಿಕಾರ ನೀಡದ ಕುಮಾರಸ್ವಾಮಿ

05:58 PM Feb 26, 2021 | Team Udayavani |

ಚನ್ನಪಟ್ಟಣ: ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಬಿಜೆಪಿ ನೀಡುತ್ತಿರುವ ಹೊಡೆತ ಪಾಠ ಕಲಿಸಿದೆ. ಇದರಿಂದ ತಮ್ಮ ಬುಡವನ್ನು ಭದ್ರಗೊಳಿಸಿಕೊಳ್ಳಲು ಜನರ ಮುಂದೆ ಬಂದು ನಿಲ್ಲುತ್ತಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್‌ ವಾಗ್ಧಾಳಿ ನಡೆಸಿದರು.

Advertisement

ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷ ಆರ್‌.ಎಂ.ಮಲವೇಗೌಡ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಈ ತಾಲೂಕಿಗೆ ಯಾವುದೇ ಕೊಡುಗೆ ನೀಡಿಲ್ಲ. ಬಂಗಾರದ ಮನುಷ್ಯನ ತರ ರಾಮನಗರ ಜಿಲ್ಲೆಯಲ್ಲಿ ಬೇವು ಬಿತ್ತಿ ಮಾವು ಬೆಳೆದೆ ಎಂದು ಹೇಳಿಕೊಳ್ಳುತ್ತಿರುವ ಅವರು, ಈ ಜಿಲ್ಲೆಯಲ್ಲಿ ಮಾಡಿರುವ ಅಭಿವೃದ್ಧಿ ಏನೂ ನನಗೆ ಕಾಣಿಸುತ್ತಿಲ್ಲ ಎಂದು ಲೇವಡಿ ಮಾಡಿದರು.

ಅಧಿಕಾರ ನೀಡಲಿಲ್ಲ: ಪಕ್ಷ ಎಂದು ಓಡಾಡುವ ಯಾವುದೇ ಮುಖಂಡರಿಗೆ ಒಂದೇ ಒಂದು ಅಧಿಕಾರ ನೀಡಲಿಲ್ಲ. ಈ ಹಿಂದೆ 20 ತಿಂಗಳು ಮುಖ್ಯಮಂತ್ರಿಯಾಗಿದ್ದಾಗಲೂ ಯಾವುದೇ ಮುಖಂಡನಿಗೆ ಅಧಿಕಾರ ನೀಡಲಿಲ್ಲ. ತಾಲೂಕಿನ ಒಬ್ಬ ಜೆಡಿಎಸ್‌ ಮುಖಂಡನೂ ವಿಧಾನಸೌಧದ ಮೆಟ್ಟಿಲು ಹತ್ತಲು ಬಿಡಲಿಲ್ಲ. ಎಚ್‌ಡಿಕೆ ಹಿಂದೆ ಹೋಗುವವರಿಗೆ ಅರಿವಾಗಬೇಕು ಎಂದರು.

ಅಕ್ರಮವಾಗಿ ನಿವೇಶನ ನಿರ್ಮಾಣ: ನಗರದಲ್ಲಿ ರವಿನ್ಯೂ ಭೂಮಿಯಲ್ಲಿ ಅಕ್ರಮವಾಗಿ ನಿವೇಶನ ನಿರ್ಮಿಸಿದ್ದು, ಪ್ರಾಧಿಕಾರದ ಯಾವುದೇ ನಿಯಮವನ್ನು ಪಾಲಿಸದ ಕಾರಣ ಇಡೀ ಚನ್ನಪಟ್ಟಣ ನಗರದಲ್ಲಿ ಹೊಸ ಬಡಾವಣೆಗಳು ಅವ್ಯವಸ್ಥೆಯ ಆಗರವಾಗಿವೆ. ಎಲ್ಲಿಂದಲೋ ಬಂದು ಇಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮ ಮಾಡುತ್ತಿರುವ ಒಂದಿಬ್ಬರು ವ್ಯಕ್ತಿಗಳು ಇಡೀ ನಗರಕ್ಕೆ ಶಾಪವಾಗಿ ಪರಿಣಮಿಸಿದ್ದಾರೆ ಎಂದರು.

ಅಭಿವೃದ್ಧಿ ಕೆಲಸ ಕೈಗೊಳ್ಳಿ: ಯೋಜನಾ ಪ್ರಾಧಿಕಾರ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕೆಲಸವನ್ನು ಕೈಗೊಳ್ಳ  ಬೇಕಿದ್ದು, ಭವಿಷ್ಯದ ದೃಷ್ಟಿಯಿಂದ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡು ನಗರದ ಅಭಿವೃದ್ಧಿಗೆ ಸಮರ್ಪಕ ಯೋಜನೆಯನ್ನು ರೂಪಿಸುವ ಹೊಣೆಗಾರಿಕೆ ಈ ಪ್ರಾಧಿಕಾರಕ್ಕೆ ಇದೆ. ಯಾವುದೇ ಮರ್ಜಿಗೆ ಒಳಗಾಗದೆ ಕಾನೂನು ಪಾಲಿಸುವ ಕೆಲಸವನ್ನು ನೂತನ ಅಧ್ಯಕ್ಷರು ಮತ್ತು ಸದಸ್ಯರು ಮಾಡಿ ನಿಮಗೆ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು  ಭರವಸೆ ನೀಡಿದರು.

Advertisement

ಯೋಜನಾ ಪ್ರಾಧಿಕಾರದ ಅಧ್ಯಕ್ಷ ಆರ್‌.ಎಂ. ಮಲವೇಗೌಡ, ಸದಸ್ಯ ಸಿ.ವಿ.ಮಂಜುನಾಥ್‌,ಬಸವರಾಜು, ಚಕ್ಕಲೂರು ಚೌಡಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು, ತಾಪಂ ಅಧ್ಯಕ್ಷ ಹರೂರು ರಾಜಣ್ಣ, ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಟಿ.ಜಯರಾಮು, ನಗರ ಬಿಜೆಪಿ ಅಧ್ಯಕ್ಷ ಶಿವಕುಮಾರ್‌, ರಾಮನಗರ ಪ್ರಾಧಿಕಾರದ ಅಧ್ಯಕ್ಷ ಮುರುಳಿ, ಕನಕಪುರ ಪ್ರಾಧಿಕಾರದ ಅಧ್ಯಕ್ಷ ಜಗನ್ನಾಥ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next