Advertisement

ಪ್ರಚೋದನೆಯಿಂದ ರೈತರ ಪರೇಡ್ ನಡೆದಿದೆ: ಬಿ.ಸಿ ಪಾಟೀಲ್

11:34 AM Jan 26, 2021 | Team Udayavani |

ಕೊಪ್ಪಳ: ಕೃಷಿ ಕಾಯ್ದೆಯನ್ನು ವಿರೋಧಿಸಿದವರ ಪ್ರಚೋದನೆಯಿಂದಾಗಿ ಇಂದು ರೈತರು ಪರೇಡ್ ನಡೆಸುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪೊಲೀಸರು ರೈತರ ಟ್ರ್ಯಾಕ್ಟರ್ ಪರೇಡ್ ತಡೆದಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಅವರು ಹೇಳಿದರು.

Advertisement

ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ನಮ್ಮ ಸರ್ಕಾರ ತಂದಿರುವ ಕೃಷಿ ಕಾಯ್ದೆಗಳು ರೈತರ ಪರವಾಗಿವೆ. ಅವರಿಗಾಗಿಯೇ ಕಾಯ್ದೆ ತರಲಾಗಿದೆ. ಆದರೆ 2008, 2013 ಹಾಗೂ 2019 ರಲ್ಲಿ ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ, ನಮ್ಮ ಸರ್ಕಾರ ಬಂದರೆ ಕಾಯ್ದೆ ತೆಗೆದು ಹಾಕುತ್ತೇವೆ ಎನ್ನುವವರು ರೈತರಿಗೆ ಪ್ರಚೋದನೆ ಮಾಡಿದ್ದರಿಂದ ಇಂದು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಹೆಸರೇಳದೇ ಪರೋಕ್ಷವಾಗಿ ಕುಟುಕಿದರು.

ಇದನ್ನೂ ಓದಿ:ಕೇಂದ್ರದ ನೂತನ ಮೂರು ಕೃಷಿ ಕಾಯ್ದೆ ಮಹಾರಾಷ್ಟ್ರದಲ್ಲಿ ಜಾರಿಗೊಳಿಸಲ್ಲ: ಸ್ಪೀಕರ್ ಪಟೋಲೆ

ರೈತ ಟ್ರ್ಯಾಕ್ಟರ್ ತಡೆದ ವಿಚಾರಕ್ಕೆ, ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಹಾಗೂ ಸಂಚಾರ ವ್ಯವಸ್ಥೆ ಸುಗಮವಾಗಬೇಕು ಎನ್ನುವ ಕಾರಣಕ್ಕೆ ಪೊಲೀಸ್ ಇಲಾಖೆ ರೈತರ ಟ್ರ್ಯಾಕ್ಟರ್ ಗಳನ್ನ ತಡೆದಿರಬಹುದು ಎಂದರು.

ಎಲ್ಲಿಅಕ್ರಮ ಗಣಿಗಾರಿಕೆ ಹಾಗೂ ಮರಳು ಮಾಫಿಯಾ, ಅಕ್ಕಿ ಮಾಫಿಯಾ ನಡೆದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದೇನೆ ಎಂದರು.

Advertisement

ರಾಜ್ಯದಲ್ಲಿ ಪದೇ ಪದೆ ಖಾತೆ ಬದಲಾವಣೆ ವಿಚಾರದ ಬಗ್ಗೆ ಮಾತನಾಡಿದ ಅವರು, ಸಿಎಂಗೆ ಪರಮಾಧಿಕಾರವಿದೆ. ಅವರು ಹಿರಿಯರು, ಮುತ್ಸದ್ದಿಗಳಿದ್ದಾರೆ. ಅವರು ಎಲ್ಲವನ್ನು ಸರಿದೂಗಿಸಿಕೊಂಡು ಹೋಗುತ್ತಾರೆ. ಖಾತೆ ಬದಲಾವಣೆ ಬಳಿಕ ಎಲ್ಲವೂ ಸರಿಹೋಗಲಿದೆ. ಸಚಿವ ಆನಂದ್ ಸಿಂಗ್ ಅವರು ಖಾತೆ ಬದಲಾವಣೆಯಿಂದ ಅಸಮಾಧಾನವಾಗಿದ್ದಾರೆ. ಅವರು ಅರಣ್ಯ ಖಾತೆಯನ್ನು ಚೆನ್ನಾಗಿ ನಿಭಾಯಿಸುತ್ತಿದ್ದರು. ನಾನು ಅವರನ್ನ ಭೇಟಿ‌ ಮಾಡಿದ್ದೇನೆ. ಆನಂದ್ ಸಿಂಗ್‌ ಅವರು ಸಿಎಂ ಭೇಟಿ ಮಾಡುವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕಲಬುರಗಿ ಉಸ್ತುವಾರಿ ಕೊಟ್ಟರೆ ನಿಭಾಯಿಸುವೆ: ಉಮೇಶ್ ಕತ್ತಿ

ಹೆಚ್. ವಿಶ್ವನಾಥ್ ಅವರಿಗೆ ಮಂತ್ರಿಯಾಗಲು ಬರಲ್ಲ ಎಂದು ಕೋರ್ಟ್ ಹೇಳಿದೆ. ಅಲ್ಲದೆ ಸರ್ಕಾರವು ಅವರನ್ನು ಪರಿಷತ್ ಸದಸ್ಯರಾಗಿ ನಾಮಿನೆಟ್ ಮಾಡಿದೆ. ಉಳಿದವರು ಜನರಿಂದ ಆಯ್ಕೆಯಾಗಿದ್ದಾರೆ. ಕೋರ್ಟ್ ಸಹಿತ ರಾಜ್ಯ ಸರ್ಕಾರದಿಂದ ನಾಮಿನೆಟ್ ಆದವರನ್ನು ಮಂತ್ರಿ ಮಾಡಲು ಅವಕಾಶವಿಲ್ಲ ಎಂದು‌ ಹೇಳಿದ್ದರಿಂದ ವಿಶ್ವನಾಥ್ ಅವರನ್ನ ಮಂತ್ರಿ ಮಾಡಲು ಸಾಧ್ಯವಿಲ್ಲ ಎಂದರು.

ಜಿಲ್ಲಾ ಉಸ್ತುವಾರಿ ಬದಲಾವಣೆ ವಿಚಾರ ಸಿಎಂಗೆ ಅಧಿಕಾರವಿದೆ. ಅವಶ್ಯವಿದ್ದರೆ ಮಾಡುತ್ತಾರೆ ಎಂದರಲ್ಲದೆ ಮಾಧ್ಯಮದವರೇ ಎಲ್ಲ ಖಾತೆ ಹಂಚಿಕೆ, ಬದಲಾವಣೆ ಮಾಡುತ್ತಿದ್ದಾರೆ ಎಂದು ಹಾಸ್ಯ‌ಚಟಾಕಿ ಹಾರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next