Advertisement

ಭೋವಿ ಸಮಾಜ ಒಡೆಯಲು ಸಚಿವ ಆಂಜನೇಯ ಯತ್ನ

11:43 AM Oct 04, 2017 | Team Udayavani |

ಬೆಂಗಳೂರು: ಭೋವಿ ಸಮಾಜವನ್ನು ಒಡೆದಾಳುವ ಕಾರ್ಯಕ್ಕೆ ಸಚಿವ ಆಂಜನೇಯ ಕೈಹಾಕಿದ್ದಾರೆ ಎಂದು ಭೋವಿ ಸಮುದಾಯದ ಭಾರತೀಯ ಒಡ್‌ ಸಮಾಜ ಸೇವಾ ಸಂಘದ ರಾಷ್ಟ್ರೀಯ ಅಧ್ಯಕ್ಷ ವೆಂಕಟೇಶ್‌ ಮೌರ್ಯ ಆರೋಪಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಚಿವ ಆಂಜನೇಯ ಅವರ ಕಾರ್ಯವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅ.8ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿರುವ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭೋವಿ ಸಮುದಾಯದ ಅಭಿವೃದ್ಧಿಗಾಗಿ ದುಡಿದವರಿಗೆ ಆಹ್ವಾನ ನೀಡದೆ ಕಡೆಗಾಣಿಸಲಾಗಿದೆ.

ಅಲ್ಲದೆ ಸರ್ಕಾರದ ಶಿಷ್ಟಾಚಾರವನ್ನೂ ಪಾಲಿಸದೆ ಅಗೌರವ ತೋರಲಾಗಿದೆ. ಇದರಲ್ಲಿ ಸಚಿವ ಆಂಜನೇಯ ಅವರ ಷ್ಯಡ್ಯಂತ್ರವಿದ್ದು, ಸದಾಶಿವ ಆಯೋಗ ವರದಿ ಜಾರಿಯ ಹುನ್ನಾರ ಅಡಗಿದೆ ಎಂದು ದೂರಿದರು. ಈ ವೇಳೆ ಸಂಘಟನೆಯ ಕಲಬುರಗಿ ಜಿಲ್ಲಾಧ್ಯಕ್ಷ ಚಂದ್ರಶೇಖರ, ರಾಯಚೂರು ಜಿಲ್ಲಾಧ್ಯಕ್ಷ ಕಾಶಿನಾಥ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next