Advertisement

ಅವಾಚ್ಯ ಪದ ಬಳಸಿದ ಸಚಿವ ಆಂಜನೇಯ!

06:50 AM Nov 13, 2017 | Team Udayavani |

ಕೊಪ್ಪಳ: ನಗರದ ಪ್ರವಾಸಿ ಮಂದಿರದಲ್ಲಿ ಚಹ ಕೊಡಲು ವಿಳಂಬ ಮಾಡಿದ್ದಕ್ಕೆ ರೊಚ್ಚಿಗೆದ್ದ ಸಮಾಜ ಕಲ್ಯಾಣ ಇಲಾಖೆ
ಸಚಿವ ಎಚ್‌.ಆಂಜನೇಯ ಪ್ರವಾಸಿ ಮಂದಿರದ ಸಹಾಯಕರಿಗೆ ಅವಾಚ್ಯ ಶಬ್ದಗಳಿಂದ ಜರಿದು ಕೆಳಮಟ್ಟದ ಭಾಷೆ ಬಳಸಿದ ಪ್ರಸಂಗ ನಡೆಯಿತು. 

Advertisement

ಕೊಪ್ಪಳದಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ಮೋಚಿಗಾರ ಸಮಾವೇಶದಲ್ಲಿ ಪಾಲ್ಗೊಳ್ಳಲು ಲೋಕಸಭೆಯ ಮಾಜಿ ಸ್ಪೀಕರ್‌ ಮೀರಾ ಕುಮಾರ ಆಗಮಿಸಿದ್ದರು. ಸಚಿವ ಆಂಜನೇಯ ಅವರೂ ಸಮಾವೇಶದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿ ನಗರದ ಪ್ರವಾಸಿ ಮಂದಿರದಲ್ಲಿ ತಂಗಿದ್ದರು. ಈ ವೇಳೆ, ಮೀರಾ ಕುಮಾರ ಅವರಿಗೆ ಚಹ ಕೊಡಿ ಎಂದು ಸಚಿವ ಆಂಜನೇಯ ಹೇಳಿದ್ದರು. ಸಹಾಯಕ ಚಹ ತರುವಲ್ಲಿ ವಿಳಂಬ ಮಾಡಿದ್ದಕ್ಕೆ ಸಿಡಿಮಿಡಿಗೊಂಡ ಎಚ್‌.ಆಂಜನೇಯ, “ಯಾವ ಸೂ..ಮಗ, ಒಬ್ಬೊವನು ಇಲ್ಲಿ ಇಲ್ಲವಲ್ಲ. ಎಲ್ಲಿ ಹೋಗಿದ್ದಾನೆ ಸೂ..ಮಗ’ ಎಂದೆಲ್ಲ ಕೆಳಮಟ್ಟದ ಭಾಷೆಯಲ್ಲಿ ಜರಿದರು. ಕ್ಯಾಮರಾ ಕಣ್ಣು ಬೀಳುತ್ತಿದ್ದಂತೆ ಕ್ಷಮಿಸಿ ಎನ್ನುತ್ತಲೇ ಸಮಾಜದ ಮುಖಂಡರಿಂದ ಹೂವಿನ ಹಾರ ಹಾಕಿಸಿಕೊಳ್ಳುವಲ್ಲಿ ಸಚಿವರು ತಲ್ಲೀನರಾದರು.
 

Advertisement

Udayavani is now on Telegram. Click here to join our channel and stay updated with the latest news.

Next