Advertisement

ಬಾಳೆಕಾಯಿ ಟೆಂಡರ್‌ಗೆ ಸಚಿವರ ಶ್ಲಾಘನೆ

04:34 PM May 05, 2020 | Suhan S |

ಶಿರಸಿ: ಕೋವಿಡ್‌ 19 ರ ಕಷ್ಟದಲ್ಲಿರುವ ರೈತರಿಗೆ ನೆರವಾಗಲು ರಾಜ್ಯದಲ್ಲೇ ಪ್ರಥಮ ಬಾರಿಗೆ ಕದಂಬ ಮಾರ್ಕೇಟಿಂಗ್‌ ಸೌಹಾರ್ದ ಸಹಕಾರಿ ಆರಂಭಿಸಿದ ಬಾಳೆಕಾಯಿ ಟೆಂಡರ್‌ಗೆ ಸಚಿವ ದ್ವಯರು ಚಾಲನೆ ನೀಡಿದರು.

Advertisement

ಕೃಷಿ ಸಚಿವ ಬಿ.ಸಿ. ಪಾಟೀಲ, ಕಾರ್ಮಿಕ ಸಚಿವ ಶಿವರಾಮ ಹೆಬ್ಟಾರ ಕದಂಬ ಬಾಳೆಕಾಯಿಗೂ ಟೆಂಡರ್‌ ವ್ಯವಸ್ಥೆ ಮಾಡಿದ್ದನ್ನು ಬಣ್ಣಿಸಿ ನೂತನ ಬಾಳೆಹಣ್ಣಿನ ಚಾಕಲೇಟ್‌ ಕೂಡ ಬಿಡುಗಡೆಗೊಳಿಸಲಾಯಿತು.

ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಅಶೀಸರ, ಕದಂಬ ಅಧ್ಯಕ್ಷ ಶಂಭುಲಿಂಗ ಹೆಗಡೆ, ವ್ಯವಸ್ಥಾಪಕ ವಿಶ್ವೇಶ್ವರ ಭಟ್ಟ ಕೋಟೆಮನೆ ಇತರರು ಇದ್ದರು. ಪ್ರಥಮ ದಿನವೇ 30 ಟನ್‌ಗೂ ಅಧಿಕ ಬಾಳೆಕೊನೆಗಳು ಬಂದಿದ್ದವು. ಪ್ರಥಮ ದಿನವೇ 300 ಕ್ವಿಂಗೂ ಅಧಿಕ ಬಾಳೆಕೊನೆಗಳು ಬಂದಿದ್ದವು. 20 ಟೆಂಡರ್‌ದಾರರು ಭಾಗವಹಿಸಿದ್ದು, ಮೆಟ್ಲಿ 18 ರೂ. ಕರಿಬಾಳೆ 10 ರೂ. ಪ್ರಥಮ ಶ್ರೇಣಿ ಕೊನೆಗಳು ಮಾರಾಟ ಆದವು. ಮಂಗಳವಾರ ಹಾಗೂ ಶುಕ್ರವಾರ ಟೆಂಡರ್‌ ನಡೆಯಲಿದ್ದು, ಉಳಿದ ದಿನ ನೇರ ಖರೀದಿ ಮಾಡಲಾಗುತ್ತಿದೆ. ಕಳೆದ ವಾರ ಮೆಟ್ಲಿ 8ರಿಂದ 10 ರೂ., ಕರಿಬಾಳೆ 4 ರೂ. ಕೇಜಿಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next