Advertisement

Mining; ನನ್ನ ಮೇಲೆ ಸಿಟ್ಟು ; ದೇವದಾರಿಗೆ ತಡೆ : ಕೇಂದ್ರ ಸಚಿವ ಕುಮಾರಸ್ವಾಮಿ

01:36 AM Jun 24, 2024 | Team Udayavani |

ರಾಮನಗರ: ದೇವದಾರಿ ಬೆಟ್ಟದಲ್ಲಿ ಗಣಿಗಾರಿಕೆ ಯೋಜನೆಗೆ ತಾನು ಸಹಿ ಹಾಕಿದ್ದು ಎಂಬ ಕಾರಣಕ್ಕೆ ರಾಜ್ಯ ಸರಕಾರ ಅದಕ್ಕೆ ಅಡ್ಡಗಾಲು ಹಾಕಿದೆ ಎಂದು ಕೇಂದ್ರ ಉಕ್ಕು ಸಚಿವ ಎಚ್‌.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚನ್ನಪಟ್ಟಣದಲ್ಲಿ ರವಿವಾರ ಮಾತನಾಡಿದ ಅವರು, ಗಣಿಗಾರಿಕೆಗೆ ಅವಕಾಶ ಕೊಟ್ಟ ದ್ದಕ್ಕೂ ನನಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

Advertisement

ನಾನು ಸಹಿ ಹಾಕಿರುವುದು ಕುದುರೆಮುಖ ಕಬ್ಬಿಣ ಮತ್ತು ಅದಿರು ಕಂಪೆನಿ ಹಾಗೂ ಅದರ ಚಟುವಟಿಕೆ ಮುಂದು ವರಿಸಲು. ಕಬ್ಬಿಣದ ಅದಿರು ಎತ್ತಲು ಅವಕಾಶ ಕೊಟ್ಟದ್ದಕ್ಕೂ ನನಗೂ ಸಂಬಂಧವಿಲ್ಲ ಎಂದರು.

ಸುಮಾರು 15 ವರ್ಷಗಳಿಂದ ಸಂಸ್ಥೆ 124 ಕೋಟಿ ರೂ. ನಷ್ಟದಲ್ಲಿದೆ. ಕೆಲಸ ಪ್ರಾರಂಭಿಸಲು 1,738 ಕೋಟಿ ರೂ. ಅಗತ್ಯ ಇದೆ. ಅದನ್ನು ಕ್ರೋಡೀಕರಿಸಲು 2 ಬ್ಯಾಂಕ್‌ಗಳಲ್ಲಿ ಸಾಲ ಪಡೆಯುತ್ತಿದ್ದಾರೆ. ಇದಕ್ಕೆ ಆರ್ಥಿಕ ಇಲಾಖೆಯ ಒಪ್ಪಿಗೆ ಬೇಕು. ಅದಕ್ಕೆ ನಾನು ಆ ಕಡತ ಕಳುಹಿಸಿದ್ದೇನೆ. ಹೊಸ ಗಣಿಗಾರಿಕೆ ಮಾಡುವ ತೀರ್ಮಾನ ನನ್ನಿಂದ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next