Advertisement

ಎಂ.ಜಿ.ರಸ್ತೆಯಿಂದ ಮೆಟ್ರೋ ಸೇವೆ ಪುನರಾರಂಭ

06:42 AM Jan 02, 2019 | Team Udayavani |

ಬೆಂಗಳೂರು: ಎಂ.ಜಿ.ರಸ್ತೆ-ಇಂದಿರಾನಗರ ನಡುವೆ ಕಳೆದ ಮೂರು ದಿನಗಳಿಂದ ಸ್ಥಗಿತಗೊಂಡಿದ್ದ “ನಮ್ಮ ಮೆಟ್ರೋ’ ಸೇವೆ ಮಂಗಳವಾರ ಪುನರಾರಂಭಗೊಂಡಿತು. ಬೆಳಗ್ಗೆ 9.35ರ ಸುಮಾರಿಗೆ ಉದ್ದೇಶಿತ ಮಾರ್ಗದಲ್ಲಿ ಮೆಟ್ರೋ ಸೇವೆ ಎಂದಿನಂತೆ ಸೇವೆ ಆರಂಭಿಸಿತು. ಈ ಮೂಲಕ ಇಡೀ ನೇರಳೆ ಮಾರ್ಗ (ಬೈಯಪ್ಪನಹಳ್ಳಿ-ಮೈಸೂರು ರಸ್ತೆ)ದಲ್ಲಿ ಯಾವುದೇ ವ್ಯತ್ಯಯ ಇಲ್ಲದಂತೆ ಮೆಟ್ರೋ ಕಾರ್ಯಾಚರಣೆ ಮಾಡುತ್ತಿದೆ.  

Advertisement

ಟ್ರಿನಿಟಿ ವೃತ್ತ ನಿಲ್ದಾಣದ ಬಳಿಯ 155ನೇ ಕಂಬದಲ್ಲಿ ಕಾಂಕ್ರೀಟ್‌ ಶಿಥಿಲಗೊಂಡಿದ್ದರಿಂದ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ಸೇವೆ ಸ್ಥಗಿತಗೊಳಿಸಲಾಗಿತ್ತು. ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌, ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು,

ಮಂಗಳವಾರ ಮಧ್ಯಾಹ್ನದ ನಂತರ ಸೇವೆ ಪುನರಾರಂಭಗೊಳ್ಳಲಿದೆ ಎಂದು ತಿಳಿಸಿದ್ದರು. ಆದರೆ, ಬೆಳಗ್ಗೆಯಿಂದಲೇ ಸೇವೆಗೆ ಲಭ್ಯವಾಗಿರುವುದು ಪ್ರಯಾಣಿಕರಿಗೆ ಸಂತಸ ತಂದಿತು. ಎಂ.ಜಿ. ರಸ್ತೆ-ಇಂದಿರಾನಗರ ನಡುವೆ ಡಿ.28ರಂದು ರಾತ್ರಿ 8 ಗಂಟೆಯಿಂದ ಮೆಟ್ರೋ ಸೇವೆ ಸ್ಥಗಿತಗೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next