Advertisement

ಕ್ರೀಡೆಯಿಂದ ಮಾನಸಿಕ ಸ್ಥೈರ್ಯ: ನಾಗೇಶ್‌ ಬೊಳ್ಳೂರು

02:40 PM Oct 07, 2017 | |

ಪಕ್ಷಿಕೆರೆ : ಕ್ರೀಡೆಯು ದೈಹಿಕ ಮಾನಸಿಕ ಸ್ಥೆರ್ಯ ಹಾಗೂ ಆರೋಗ್ಯ ರಕ್ಷಣೆಗೂ ಸಹಕಾರಿ ಎಂದು ಕೆಮ್ರಾಲ್‌ ಗ್ರಾಮ ಪಂಚಾಯತ್‌ ಅಧ್ಯಕ್ಷ ನಾಗೇಶ್‌ ಬೊಳ್ಳೂರು ಹೇಳಿದರು.

Advertisement

ಅವರು ಕಲಾತರಂಗ್‌ ಹಾಗೂ ಕೆಮ್ರಾಲ್‌ ಗ್ರಾಮ ಪಂಚಾಯತ್‌ ಜಂಟಿ ಆಶ್ರಯದೊಂದಿಗೆ ಭಟ್ಟಕೋಡಿ ದ್ವಾರದಿಂದ ಪಕ್ಷಿಕೆರೆ ದ್ವಾರದ ತನಕ ಆಯೋಜಿಸಿದ ಮ್ಯಾರಥಾನ್‌ ಓಟದ ಸಮಾರೋಪದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಮೂಲ್ಕಿ ಪೊಲೀಸ್‌ ನಿರೀಕ್ಷಕ ಶಾಂತಪ್ಪ ಅವರು ಭಾಗವಹಿಸಿ ಬಹುಮಾನ ವಿತರಿಸಿದರು.

ಉದ್ಯಮಿ ಧನಂಜಯ ಶೆಟ್ಟಿಗಾರ್‌, ಪಂಚಾಯತ್‌ ಕಾರ್ಯದರ್ಶಿ ಕೇಶವ್‌ ದೇವಾಡಿಗ, ಉಪಾಧ್ಯಕ್ಷೆ ತುಳಸಿ ಶೆಟ್ಟಿಗಾರ್‌, ಗೀತಾ ಆರ್‌.ಶೆಟ್ಟಿ, ವಿನಾಯಕ ಮಿತ್ರ ಮಂಡಳಿಯ ಉಮೇಶ್‌ ಹಾಗೂ ಅನೇಕ ಸಂಘ ಸಂಸ್ಥೆಯ ಅಧ್ಯಕ್ಷರು ಉಪಸ್ಥಿತರಿದ್ದರು. ಕಲಾ ತರಂಗ್‌ನ ಸಂಘಟಕ ನಿತಿನ್‌ವಾಸ್‌ ಸ್ವಾಗತಿಸಿದರು. ಉಪನ್ಯಾಸಕಿ ಅರ್ಪಿತಾ ಶೆಟ್ಟಿ ನಿರೂಪಿಸಿದರು.

ಫ‌ಲಿತಾಂಶ
ಸ್ಪರ್ಧೆಯಲ್ಲಿ 13ರಿಂದ 16ವರ್ಷದ ವಿಭಾಗದಲ್ಲಿ ಪ್ರಥಮ ಪ್ರಣಾಮ್‌ ಶೆಟ್ಟಿ ,ದ್ವಿತೀಯ -ಹರ್ಷಿತ್‌, 17ರಿಂದ 20ವರ್ಷದ ವಿಭಾಗದಲ್ಲಿ ಪ್ರಥಮ -ನಿಖೇಶ್‌ ಪೂಜಾರಿ, ದ್ವಿತೀಯ -ಮನೋಹರ್‌, ಹಾಗೂ 21 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರ ವಿಭಾಗದಲ್ಲಿ ಪ್ರಥಮ -ಸಚಿನ್‌ ಪೂಜಾರಿ, ದ್ವಿತೀಯ ಸುನೀಲ್‌ ಡಿ’ಸಿಲ್ವಾ ವಿಜೇತರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next