Advertisement

ಅಪಾಯಕಾರಿ ಮೆಲ್ಕಾರ್‌ ಜಂಕ್ಷನ್‌ : ಟ್ರಾಫಿಕ್‌ ಪೊಲೀಸ್‌ ನಿಯೋಜಿಸಲು ಆಗ್ರಹ

02:30 AM Apr 21, 2021 | Team Udayavani |

ಬಂಟ್ವಾಳ: ಮೆಲ್ಕಾರ್‌ ಪಟ್ಟಣವು ಅಭಿವೃದ್ಧಿಗೊಳ್ಳುತ್ತಿದ್ದಂತೆ ಇಲ್ಲಿನ ವಾಹನ ಓಡಾಟವೂ ಹೆಚ್ಚುತ್ತಿದೆ. ಹೀಗಾಗಿ ಇಲ್ಲಿನ ಜಂಕ್ಷನ್‌ ಅಪಾಯಕಾರಿಯಾಗಿ ಪರಿಣಮಿಸಿದ್ದು, ನಿತ್ಯವೂ ಒಂದಿಲ್ಲೊಂದು ಅಪಘಾತಗಳು ನಡೆಯುತ್ತಲೇ ಇರುತ್ತವೆೆ. ಹೀಗಾಗಿ ಈ ಜಂಕ್ಷನ್‌ಗೆ ಸಂಬಂಧಪಟ್ಟವರು ಸುರಕ್ಷಿತ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.

Advertisement

ಮೆಲ್ಕಾರ್‌ ಪಟ್ಟಣದ ಮೂಲಕ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿದ್ದು, ಜತೆಗೆ ಕೊಣಾಜೆ, ಮುಡಿಪು ಭಾಗದಿಂದ ಆಗಮಿಸಿರುವ ಪ್ರಮುಖ ರಸ್ತೆ ಮೆಲ್ಕಾರ್‌ನಲ್ಲಿ ಸೇರುತ್ತಿರುವುದರಿಂದ ದಿನದ ಎಲ್ಲ ಹೊತ್ತು ಸಾವಿರಾರು ವಾಹನಗಳು ಓಡಾಡುತ್ತಲೇ ಇರುತ್ತದೆ. ಒಂದು ರಸ್ತೆಯಿಂದ ಮತ್ತೂಂದು ರಸ್ತೆಗೆ ವಾಹನ ಸಾಗುವುದಕ್ಕೆ ಯಾವುದೇ ಸೂಚನೆಗಳು ಇಲ್ಲದೇ ಇರುವುದರಿಂದ ಚಾಲಕರು/ಸವಾರರು ಗೊಂದಲಕ್ಕೀಡಾಗಿ ಅಪಘಾತ ಸಂಭವಿಸುತ್ತದೆ.

ನಿತ್ಯವೂ ಸಂಭವಿಸುತ್ತಿರುವ ಅಪ ಘಾತಗಳು ಸಣ್ಣ ಮಟ್ಟದ ಅಪಘಾತಗಳಾದ ಕಾರಣ ಸಂಬಂಧಪಟ್ಟ ಸ್ಥಳೀಯಾಡಳಿತ, ಪೊಲೀಸ್‌ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ.

ಟ್ರಾಫಿಕ್‌ ಪೊಲೀಸ್‌ ನಿಯೋಜಿಸಲು ಆಗ್ರಹ
ಪ್ರತಿದಿನವೂ ಬೆಳಗ್ಗಿನಿಂದ ರಾತ್ರಿವರೆಗೂ ಮೆಲ್ಕಾರ್‌ ಜಂಕ್ಷನ್‌ನಲ್ಲಿ ಟ್ರಾಫಿಕ್‌ ಪೊಲೀಸ್‌ ಸಿಬಂದಿ ಯನ್ನು ನಿಯೋಜಿಸಬೇಕು. ಹೆಚ್ಚು ವಾಹನದೊತ್ತಡ ಇದ್ದಾಗ ಪೊಲೀಸರು ಎಲ್ಲ ರಸ್ತೆಗಳಲ್ಲೂ ಕ್ರಮವಾಗಿ ವಾಹನಗಳನ್ನು ಬಿಡುವುದಕ್ಕೆ ಅನುಕೂಲವಾಗುತ್ತದೆ. ಜತೆಗೆ ಜನರು ಒಂದು ಭಾಗದಿಂದ ಮತ್ತೂಂದು ಭಾಗಕ್ಕೆ ರಸ್ತೆ ದಾಟುವ ವೇಳೆಯೂ ಸಹಕಾರಿಯಾಗಲಿದೆ ಎಂದು ಈ ಭಾಗದ ಪುರಸಭೆ ಮಾಜಿ ಸದಸ್ಯ ದಾಮೋದರ್‌ ಮೆಲ್ಕಾರ್‌ ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next