Advertisement

Tax injustice ವಿರುದ್ಧ ಬೆಂಗಳೂರಲ್ಲಿ ಸಭೆ: ಸಿದ್ದು ಸಲಹೆಗೆ ಡಿಎಂಕೆ ಬೆಂಬಲ

12:29 AM Sep 14, 2024 | Team Udayavani |

ಚೆನ್ನೈ: ಕೇಂದ್ರ ಸರಕಾರದಿಂದಾಗುತ್ತಿರುವ ತೆರಿಗೆ ಅನ್ಯಾಯವನ್ನು ಚರ್ಚೆ ಮಾಡಲು ಬೆಂಗಳೂರಲ್ಲಿ ಮುಖ್ಯಮಂತ್ರಿಗಳ ಸಭೆ ನಡೆಸಬೇಕು ಎಂದು ಸೂಚಿಸಿದ್ದ ಕರ್ನಾಟಕ ಸಿಎಂ ಸಿದ್ದರಾಮಯ್ಯಗೆ ಡಿಎಂಕೆ ಬೆಂಬಲ ಸೂಚಿಸಿದೆ.

Advertisement

ಕೇಂದ್ರಕ್ಕೆ ತಮಿಳು ನಾಡು ಸಲ್ಲಿಸುತ್ತಿರುವ 1 ರೂ.ನಲ್ಲಿ ಕೇವಲ 29 ಪೈಸೆಯನ್ನು ಮಾತ್ರ ಹಿಂಪಡೆಯುತ್ತಿದೆ. ಈ ಬಗ್ಗೆ ತಮಿಳುನಾಡು ಸರಕಾರ ಈಗಾಗಲೇ ಧ್ವನಿ ಎತ್ತಿದೆ. ಸಿದ್ದರಾಮಯ್ಯ ಅವರ ಸಲಹೆಗೆ ನಮ್ಮ ಬೆಂಬಲವಿದೆ ಎಂದು ಡಿಎಂಕೆ ವಕ್ತಾರ ಹಫೀಜ್‌ ಉಲ್ಲಾ ಹೇಳಿದ್ದಾರೆ.

ವಿಪಕ್ಷಗಳ ಆಡಳಿತ ಇರುವ ರಾಜ್ಯಗಳ ಸಭೆ ಗುರುವಾರ ತಿರುವನಂತಪುರದಲ್ಲಿ ನಡೆದಿತ್ತು. ಮತ್ತೂಂದು ಸಭೆ ಬೆಂಗಳೂರಿನಲ್ಲಿ ನಡೆಸುವ ಬಗ್ಗೆ ಸೆ.11ರಂದು ತಮಿಳುನಾಡು ಸೇರಿ 7 ರಾಜ್ಯಗಳ ಸಿಎಂಗಳಿಗೆ ಸಿದ್ದರಾಮಯ್ಯ ಪತ್ರ ಬರೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next