Advertisement

Shirlalu ಗ್ರಾಮ ಸಭೆಯಲ್ಲಿ ಹೊಡೆದಾಟ- ಎರಡು ತಂಡಗಳ ವಿರುದ್ಧ ದೂರು ದಾಖಲು

09:14 PM Sep 04, 2024 | Team Udayavani |

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಶಿರ್ಲಾಲು ಗ್ರಾಮ ಪಂಚಾಯತ್‌ನಲ್ಲಿ ಸೆ. 3ರಂದು ಮಧ್ಯಾಹ್ನ ಗ್ರಾಮಸಭೆಯಲ್ಲಿ ಎರಡು ತಂಡಗಳ ನಡುವೆ ಹೊಡೆದಾಟ ನಡೆದ ಘಟನೆ ವಿಚಾರವಾಗಿ ಎರಡು ತಂಡಗಳ ವಿರುದ್ಧವೂ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ಬೆಳ್ತಂಗಡಿ ತಾಲೂಕು ಶಿರ್ಲಾಲು ಗ್ರಾ.ಪಂ. ಗ್ರಾಮಸಭೆ ನಡೆಯುತ್ತಿದ್ದಾಗ ಕುಶಾಲಪ್ಪ ಗೌಡ ಹಾಗೂ ನವೀನ ಸಾಲ್ಯಾನ್‌ ಅವರು ದೇವಸ್ಥಾನವೊಂದರ ಖರ್ಚು-ವೆಚ್ಚಗಳ ಕುರಿತು ಮಾತಿಗೆ ಮಾತು ಬೆಳೆಸಿದ್ದಾರೆ. ಈ ಸಂದರ್ಭದಲ್ಲಿ ಕರಂಬಾರು ಗ್ರಾಮದ ಆನಂದ ಪೂಜಾರಿ ಆಕ್ಷೇಪಿಸಿದಾಗ, ನವೀನ ಸಾಲ್ಯಾನ್‌ ಅವರು ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಈ ನಡುವೆ ಇತರ ಆರೋಪಿಗಳಾದ ರಾಮ್‌ ಕುಮಾರ್‌, ಚಿಂಕು ಯಾನೆ ರವೀಂದ್ರ, ದಿನೇಶ್‌ ಹಾಗೂ ಪುರುಷೋತ್ತಮ ಅವರು ಸೇರಿಕೊಂಡು ಹಲ್ಲೆ ನಡೆಸಿದ್ದಾರೆ. ಗಲಾಟೆ ತಡೆಯಲು ಬಂದ ಮಹಿಳೆಯೋರ್ವರಿಗೂ ಆಪಾದಿತ ಪುರುಷೋತ್ತಮ ಹಲ್ಲೆ ನಡೆಸಿ ಅನುಚಿತವಾಗಿ ವರ್ತಿಸಿದ್ದು, ಬಳಿಕ ಆರೋಪಿಗಳು ಬೆದರಿಕೆ ಹಾಕಿದ್ದಾರೆ ಎಂದು ವೇಣೂರು ಪೊಲೀಸ್‌ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

ಪ್ರತಿದೂರು ದಾಖಲು
ಇದೇ ಪ್ರಕರಣಕ್ಕೆ ಸಂಬಂಧಿಸಿ ಕರಂಬಾರು ಗ್ರಾಮದ ರವೀಂದ್ರ ಅವರಿಗೆ ಹಾಗೂ ಹಾಗೂ ರಾಮ್‌ ಕುಮಾರ್‌ ಅವರಿಗೆ, ಆರೋಪಿಗಳಾದ ಕುಶಾಲಪ್ಪ ಗೌಡ ಮತ್ತು ಆನಂದ ಪೂಜಾರಿ ಅವ್ಯಾಚವಾಗಿ ಬೈದು ಹಲ್ಲೆ ನಡೆಸಿದ್ದಾರೆ ಎಂದು ನೀಡಿದ ಪ್ರತಿದೂರಿನ ಮೇರೆಗೆ ವೇಣೂರು ಪೊಲೀಸ್‌ ಠಾಣೆಯಲ್ಲಿ ಪ್ರತಿದೂರು ದಾಖಲಾಗಿದೆ. ಗಾಯಾಳುಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next