Advertisement

ಚಿದಾನಂದ್‌ರ ಗೆಲುವಿಗೆ ಸಹಕರಿಸಲು ಮನವಿ

02:29 PM Oct 03, 2020 | Suhan S |

ಶ್ರೀನಿವಾಸಪುರ: ಕಳೆದ 13 ವರ್ಷಗಳಿಂದ ಶಿಕ್ಷಣ, ಸಾಮಾಜಿಕ, ಇತರೆ ಸಮಸ್ಯೆಗಳಿಗೆ ಸದನದ ಒಳಗೆ ಮತ್ತು ಹೊರಗೆ ನಿರಂತರವಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಬಿಜೆಪಿ ಪಕ್ಷ ನನಗೆ ಕೊಟ್ಟ ಗೌರವಕ್ಕೆ ಆಭಾರಿಯಾಗಿದ್ದೇನೆ. ಅದೇ ಗೌರವ ಉಳಿಯಲು ಶಿಕ್ಷಣ ಕ್ಷೇತ್ರದಲ್ಲಿನ ಸಂಘಗಳು ಈ ಬಾರಿ ಆಗ್ನೇಯ ಪದವೀಧರ ‌ ಕ್ಷೇತ್ರಕ್ಕೆ ಸ್ಪರ್ಧಿಸಿರುವ ಬಿಜೆಪಿ ಪಕ್ಷದ ಅಭ್ಯರ್ಥಿ ಚಿದಾನಂದ್‌ ಎಂ.ಗೌಡ ಅವರನ್ನು ಗೆಲ್ಲಿಸಿಕೊಡಬೇಕೆಂದು ವಿಧಾನ ಪರಿಷತ್‌ ಸದಸ್ಯ ವೈ.ಎ.ನಾರಾಯಣಸ್ವಾಮಿ ಮನವಿ ಮಾಡಿದರು.

Advertisement

ಶ್ರೀನಿವಾಸಪುರ ತಾಲೂಕು ಪುಂಗನೂರು ಕ್ರಾಸ್‌ನಲ್ಲಿರುವ ಶ್ರೀ ಸೀತಾರಾಮ ಕಲ್ಯಾಣ ಮಂಟಪದಲ್ಲಿ ಆಗ್ನೇಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಚಿದಾನಂದ್‌ಎಂ.ಗೌಡ ಪರವಾಗಿ ಶಿಕ್ಷಣ ಸಂಘದ ಪ್ರತಿನಿಧಿಗಳ ಕರೆದಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ನಾನು ಸ್ಪರ್ಧೆ ಮಾಡಿದ ಹಿಂದಿನ ಎಲ್ಲಾ ಚುನಾವಣೆಗಳಲ್ಲಿ ನನ್ನನ್ನು ಬೆಂಬಲಿಸಿ ಆಶೀರ್ವಾದ ಮಾಡಿದ್ದೀರಿ. ನಿಮ್ಮ ಸಹಕಾರದಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೆಲಸ ಮಾಡಲು ಸಾಧ್ಯವಾಗಿದೆ ಎಂದರೆ ನೀವು ಕೊಟ್ಟ ಶಕ್ತಿಯಾಗಿದೆ. ಅದೇ ರೀತಿ ಬಿಜೆಪಿ ಸರ್ಕಾರ ನನ್ನ ಮೇಲೆ ವಿಶ್ವಾಸವಿರಿಸಿ ಸ್ಥಾನಮಾನ ಕೊಟ್ಟಿದೆ. ಹಾಗಾಗಿ ತಾನು ಸೇರಿದಂತೆ ನೀವು ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಡಬೇಕಾಗಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಕೆ.ಎನ್‌.ವೇಣುಗೋಪಾಲ್‌ಮಾತನಾಡಿ, ವೈ.ಎ.ನಾರಾಯಣಸ್ವಾಮಿರವರು ಕಳೆದ ಅಧಿಕಾರಅವಧಿಗಳಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆಮಾತ್ರ ಮೀಸಲಾಗದೆ ಕೋಲಾರ ಜಿಲ್ಲೆಯಲ್ಲಿ ರೈತರ, ನೀರಾವರಿ ಸಮಸ್ಯೆ ಸೇರಿ ಇತ್ಯಾದಿಯಾಗಿ ಜಟಿಲ ಸಮಸ್ಯೆಗಳಬಗ್ಗೆ ಗಮನಹರಿಸಿ ಕೆಲಸ ಮಾಡಿದ್ದಾರೆ ಎಂದರು.

ವೈ.ನಾರಾಯಣಸ್ವಾಮಿ ರವರು ನಮಗೆ ನಾಯಕರು. ಅವರಹಾದಿಯಲ್ಲಿ ನಡೆಯಬೇಕು. ಗೆಲುವಿನವಿಶ್ವಾಸದಿಂದ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿಯನ್ನು ಕರೆತಂದಿದ್ದಾರೆ.ಅವರನ್ನು ಗೆಲ್ಲಿಸಬೇಕುಎಂದುಕೋರಿದರು. ಆಗ್ನೇಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಿದಾನಂದ್‌ ಗೌಡ ಮತಯಾಚಿಸಿದರು. ಶಿಕ್ಷಕರ ಹಾಗೂ ನೌಕರರ ಸಂಘದ ಪ್ರತಿನಿಧಿಗಳಾದ ಅಶೋಕ್‌, ಎಂ.ನಾಗರಾಜ್‌,ಜಿ.ಎನ್‌.ಗೋವಿಂದರೆಡ್ಡಿ, ಕೆ.ಎನ್‌.ರಾಮಚಂದ್ರ, ಆರ್‌. ಸುಬ್ರಹ್ಮಣಿ, ಮುಖಂಡ ಕೆ.ಕೆ.ಮಂಜು, ಕಿಟ್ಟಣ್ಣ,ಬಲರಾಮೇಗೌಡ, ತಿಪ್ಪಣ್ಣ, ಶಂಕರ್‌ ಡಿ.ಆರ್‌. ರಘುನಾಥರೆಡ್ಡಿ, ಅಶ್ವತ್ಥರೆಡ್ಡಿ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next