Advertisement

ಬಂಧನದಲ್ಲಿದ್ದರೂ ಎಂಇಪಿ ಅಭ್ಯರ್ಥಿ ಪರ ನಾಮಪತ್ರ

12:59 PM Apr 25, 2018 | Harsha Rao |

ಬಂಟ್ವಾಳ: ಎಂಇಪಿ ಪಕ್ಷದಿಂದ ಎ. 24ರಂದು ಬಂಟ್ವಾಳ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಬೇಕಾಗಿದ್ದ ಅಭ್ಯರ್ಥಿ ಶಮೀರ್‌ ಯಾನೆ ಚಮ್ಮಿ ಶಾಂತಿಯಂಗಡಿ ಅವರು ಮಂಗಳೂರಿನಲ್ಲಿ ಜೈಲಿನಿಂದ ಪರಾರಿ ಪ್ರಕರಣದ ಆರೋಪದಲ್ಲಿ ಸೋಮವಾರ ಪಾಂಡೇಶ್ವರ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾರೆ.

Advertisement

ಅವರು ಬಂಧನಕ್ಕೆ ಒಳಗಾದರೂ ಬಿ.ಸಿ. ರೋಡ್‌ನ‌ಲ್ಲಿ ಎ. 24ರಂದು ಅವರ ಬೆಂಬಲಿಗರು ಮೆರವಣಿಗೆ ನಡೆಸಿದರು. ಅವರ ಪರವಾಗಿ ಅಬ್ದುಲ್‌ ಜಬ್ಟಾರ್‌ ನಾಮಪತ್ರ ಸಲ್ಲಿಸಿದರು. 

ಶಮೀರ್‌ 2014ರಲ್ಲಿ ಬ್ರಹ್ಮರ ಕೂಟ್ಲು ಟೋಲ್‌ಗೇಟ್‌ನಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ಆಸ್ಪತ್ರೆಗೆ ದಾಖ ಲಾಗಿದ್ದಾಗ ಕಾವಲಿದ್ದ ಪೊಲೀಸರಿಗೆ ಹಲ್ಲೆ ನಡೆಸಿ ಪರಾರಿಯಾದ ಪ್ರಕರಣ ನಡೆದಿತ್ತು. ಪಾಂಡೇಶ್ವರ ಠಾಣೆ ಯಲ್ಲಿ ದೂರು ದಾಖಲಾಗಿ ವಾರೆಂಟ್‌ ಜಾರಿಗೊಳಿಸಲಾಗಿತ್ತು. ಪೊಲೀಸರು ಕಾರ್ಯಾಚರಣೆ ನಡೆಸಿ ಸೋಮವಾರ ರಾತ್ರಿ ಬಂಧನ ನಡೆಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next