Advertisement

ಕೋವಿಡ್‌  ರೋಗಿಗಳಿಗೆ ಮೆಡಿಕಲ್‌ ಕಿಟ್‌

09:04 PM May 25, 2021 | Team Udayavani |

ಸಕಲೇಶಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಭಾಗವಾದ ಜನ ಜಾಗರಣ ಟ್ರಸ್ಟ್‌ ವತಿಯಿಂದ ಕೋವಿಡ್‌ ಪೀಡಿತ ಬಡ ರೋಗಿಗಳಿಗೆ ಆಹಾರದ ಕಿಟ್‌ ಹಾಗೂ ಮೆಡಿಕಲ್‌ ಕಿಟ್‌ ಗಳನ್ನು ಹಂಚಲಾಗುತ್ತಿದೆ ಎಂದು ಟ್ರಸ್ಟ್‌ನ ಪ್ರಮುಖ್‌ ವಿಜಯ್‌ಕುಮಾರ್‌ ಹೇಳಿದರು.

Advertisement

ಪಟ್ಟಣದಲ್ಲಿ ಜನಜಾಗರಣ ಟ್ರಸ್ಟ್‌ವತಿಯಿಂದ ಮೆಡಿಕಲ್‌ ಕಿಟ್‌ಗಳನ್ನುಕೆಲವು ಬಡ ಕೋವಿಡ್‌ ರೋಗಿಗಳಿಗೆ ಹಾಗೂ ಕೊರೊನಾ ವಾರಿಯರ್‌ಗಳಿಗೆ ಹಂಚಿದ ನಂತರ ಮಾತನಾಡಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಡಿಯಲ್ಲಿ ಕೋವಿಡ್‌ ಪೀಡಿತರಿಗೆ ಹಲವಾರು ಸೇವೆಗಳನ್ನು ಸಲ್ಲಿಸಲಾಗುತ್ತಿದೆ.

ಈ ನಿಟ್ಟಿನಲ್ಲಿತಾಲೂಕಿನಲ್ಲಿ ಸುಮಾರು 200ಕ್ಕೂಹೆಚ್ಚು ಮೆಡಿಕಲ್‌ ಕಿಟ್‌ಗಳನ್ನುಹಂಚಲಾಗಿದ್ದು, ಜೊತೆಗೆ ಕಡು ಬಡಕುಟುಂಬದ ರೋಗಿಗಳಿಗೆ ಆಹಾರದಕಿಟ್‌ಗಳನ್ನು ಸಹ ಹಂಚಲಾಗಿದೆಎಂದರು.ಈ ವೇಳೆ ಬಿಜೆಪಿ ಮುಖಂಡಜಂಬರ್ಡಿ ಲೋಹಿತ್‌, ಸಂಘಟನೆಪ್ರಮುಖರಾದ ರಮೇಶ್‌, ಸುಭಾಷ್‌ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next