Advertisement

ಆಹಾರ ಧಾನ್ಯ ಬೇಡಿಕೆ ಖುದ್ದು ಪರಿಶೀಲನೆಗೆ ಕ್ರಮ

02:24 PM May 01, 2020 | Suhan S |

ಧಾರವಾಡ: ಲಾಕ್‌ಡೌನ್‌ ಅವಧಿಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಸಿದ್ಧ ಆಹಾರ ಮತ್ತು ಆಹಾರಧಾನ್ಯಗಳ ಬೇಡಿಕೆಯೊಂದಿಗೆ ಸಾಕಷ್ಟು ಕರೆಗಳು ಸಹಾಯವಾಣಿ ಕೇಂದ್ರಗಳಲ್ಲಿ ದಾಖಲಾಗುತ್ತಿವೆ. ಇವುಗಳಿಗೆ ಆದ್ಯತೆಯಡಿ ಆಹಾರ ವಿತರಣೆಯನ್ನು ಕೂಡಾ ಮಾಡಲಾಗುತ್ತಿದೆ ಎಂದು ಡಿಸಿ ದೀಪಾ ಚೋಳನ್‌ ಹೇಳಿದರು.

Advertisement

ಡಿಸಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಇನ್ನು ಮುಂದೆ ಬೇಡಿಕೆ ಬಂದ ಸ್ಥಳಗಳಿಗೆ ಖುದ್ದು ಭೇಟಿ ನೀಡಿ, ಅವರಿಗೆ ಈ ಮುಂಚೆ ಆಹಾರ ಧಾನ್ಯ ವಿತರಣೆ ಆಗದಿರುವುದು ಮತ್ತು ಅವರು ರೇಷನ್‌ ಕಾರ್ಡ್‌ ಹೊಂದಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕ ಆಹಾರ ಧಾನ್ಯಗಳ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದರು. ನಿಜವಾಗಿಯೂ ತೊಂದರೆಯಲ್ಲಿರುವ ಜನರಿಗೆ ಸರ್ಕಾರ ಮತ್ತು ಸ್ವಯಂ ಸೇವಾ ಸಂಸ್ಥೆಗಳು ನೀಡುವ ನೆರವು ತಲುಪಬೇಕು. ಇದನ್ನು ಖಚಿತಪಡಿಸಿಕೊಳ್ಳಲು ಬೇಡಿಕೆ ಬಂದ ಸ್ಥಳದಲ್ಲಿ ಪೂರ್ವಭಾವಿಯಾಗಿ ಪರಿಶೀಲನೆ ನಡೆಸಿ, ಬೇಡಿಕೆ ಸಲ್ಲಿಸುವವರು ಈಗಾಗಲೇ ಸ್ವಯಂ ಸೇವಾ ಸಂಸ್ಥೆಗಳ ನೆರವು ಅಥವಾ ಸರ್ಕಾರದ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆದಿಲ್ಲದಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಇದಕ್ಕಾಗಿ ಅವರ ಆಧಾರ್‌ಕಾರ್ಡ್‌ ಸಂಖ್ಯೆ ಪಡೆದು ಆಹಾರ ಧಾನ್ಯಗಳನ್ನು ವಿತರಿಸಬೇಕು ಎಂದು ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next