Advertisement

ಕೌನ್ಸಿಲರ್‌ಗಳಿಂದ ಆಣೆ ಮಾಡಿಸಿದ ಸಿಎಂ ಕೇಜ್ರಿವಾಲ್‌

01:58 AM Apr 28, 2017 | Team Udayavani |

ಹೊಸದಿಲ್ಲಿ: ಮಹಾನಗರಪಾಲಿಕೆಯಲ್ಲಿನ ಹೀನಾಯ ಸೋಲಿನಿಂದ ಕಂಗೆಟ್ಟಿರುವ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ಗುರುವಾರ ತಮ್ಮ 48 ಮಂದಿ ಕೌನ್ಸಿಲರ್‌ಗಳಿಗೆ ಶಿಸ್ತಿನ ಪಾಠ ಹೇಳಿಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಪಕ್ಷಕ್ಕೆ ದ್ರೋಹ ಎಸಗುವುದಿಲ್ಲವೆಂದು ದೇವರ ಹೆಸರಲ್ಲಿ ಪ್ರಮಾಣವನ್ನೂ ಮಾಡಿಸುವ ಮೂಲಕ ಬೆರಗು ಮೂಡಿಸಿದ್ದಾರೆ.

Advertisement

ಕೇಜ್ರಿವಾಲ್‌ ಅವರು ಕೌನ್ಸಿಲರ್‌ಗಳೊಂದಿಗೆ ಮಾತನಾಡಿ ರುವ 10 ನಿಮಿಷಗಳ ವಿಡಿಯೋ ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿದೆ. ‘ನೀವೆಲ್ಲರೂ ಜಾಗೃತರಾಗಿರಿ, ಪ್ರಾಮಾಣಿಕರಾಗಿರಿ ಮತ್ತು ಧೈರ್ಯವಾಗಿರಿ. ಬಿಜೆಪಿ ನಿಮ್ಮನ್ನು ಸೆಳೆಯಲು ಯತ್ನಿಸಬಹುದು. 10 ಕೋಟಿ ಕೊಡಲು ಮುಂದಾಗಬಹುದು. ಅಂಥ ಕರೆಬಂದರೆ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿಕೊಳ್ಳಿ. ಹಣ ಪಡೆದುಕೊಂಡರೆ, ಪಶ್ಚಾತ್ತಾಪಪಡಬೇಕಾಗುತ್ತದೆ,’ ಎಂದಿದ್ದಾರೆ ಕೇಜ್ರಿವಾಲ್‌. ಜತೆಗೆ, ‘ನಾನು ಯಾವತ್ತೂ ಈ ಪರಿಶುದ್ಧ ಪಕ್ಷಕ್ಕೆ ಮತ್ತು ಭ್ರಷ್ಟಾಚಾರ ವಿರೋಧಿ ಚಳವಳಿಗೆ ದ್ರೋಹ ಮಾಡುವುದಿಲ್ಲ ಎಂದು ದೇವರ ಸಾಕ್ಷಿಯಾಗಿ ಹೇಳುತ್ತೇನೆ’ ಎಂದು ಪ್ರಮಾಣ ಮಾಡುವಂತೆಯೂ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next