Advertisement

ಸಚಿವ ಪಾಟೀಲ್‌, ಶಾಮನೂರು ಜಟಾಪಟಿ

06:18 AM Jan 14, 2019 | Harsha Rao |

ದಾವಣಗೆರೆ: ‘ಸಚಿವ ಎಂ.ಬಿ.ಪಾಟೀಲ್‌ ಒಬ್ಬ ಮಂಗ, ಬಹಳ ಸಣ್ಣ ವಯಸ್ಸಿನವನು. ಆತನ ಬಗ್ಗೆ ನಾನು ಏನೂ ಹೇಳಲ್ಲ’ ಎಂದು ಅಖೀಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಕಾಂಗ್ರೆಸ್‌ ಶಾಸಕ ಶಾಮನೂರು ಶಿವಶಂಕರಪ್ಪ ಟೀಕಿಸಿದ್ದಾರೆ.

Advertisement

ಸಚಿವ ಎಂ.ಬಿ.ಪಾಟೀಲ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ನಾನು ಮಾತನಾಡಿದ್ದಕ್ಕೆ ಪಾಟೀಲ್‌ ಟೀಕಿಸಿದ್ದಾರೆ. ಈ ಬಗ್ಗೆ ಕಾಮೆಂಟ್ಸ್‌ ಬೇಡ’ ಎಂದರು.

‘ರಾಷ್ಟ್ರೀಯ ವೀರಶೈವ ಮಠಾಧೀಶರ ಪರಿಷತ್ತು ಶನಿವಾರ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ನಾನು ಮಾತನಾಡುವಾಗ ನೇರವಾಗಿ ಎಂ.ಬಿ.ಪಾಟೀಲ್‌ ಹೆಸರನ್ನೇ ಪ್ರಸ್ತಾಪಿಸಿಲ್ಲ. ಈ ಬಗ್ಗೆ ಆತ ಸಿಕ್ಕಾಗ ಮಾತನಾಡುವೆ, ಕಾಮೆಂಟ್ಸ್‌ ಬೇಡ’ ಎಂದರು.

‘ನಾನು ಹೇಗೆ ಬೆಳೆದಿದ್ದೇನೆ ಎಂಬುದು ಆತನಿಗೇನು ಗೊತ್ತು. ಎಂ.ಬಿ.ಪಾಟೀಲ್‌ ಅಡ್ಡದಾರಿ ಹಿಡಿದಿದ್ದ. ನಾನು ಮತ್ತು ಪ್ರಭಾಕರ ಕೋರೆ ಆತನನ್ನು ಉದ್ಧಾರ ಮಾಡಿದ್ದೇವೆ. ‘ಬಿ’ ಫಾರಂ ಹರಿದ ಬಗ್ಗೆ ಹೇಳಿದ್ದಾನೆ. ಆತನಿಗೇನು ಗೊತ್ತು. ಆತ ಮಂಗ’ ಎಂದು ಏಕವಚನದಲ್ಲೇ ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next