Advertisement

Vijayapura; ವಿಜಯೇಂದ್ರ ಪಾದಯಾತ್ರೆ ಮೊದಲು ಯತ್ನಾಳ್ ಅವರ…….: ಎಂ.ಬಿ. ಪಾಟೀಲ ತಿರುಗೇಟು

12:18 PM Jul 28, 2024 | keerthan |

ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮೂಡಾ ಹಗರಣ ಎಂದು ಮತನಾಡುವ ಮುನ್ನ ತಮ್ಮದೇ ಪಕ್ಷದ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ತಮ್ಮ ವಿರುದ್ಧ ಮಾಡಿರುವ ಭ್ರಷ್ಟಾಚಾರದ ಬಗ್ಗೆ ಉತ್ತರಿಸಿ ನಂತರ ಪಾದಯಾತ್ರೆ ಮಾಡಲಿ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ತಿರುಗೇಟು ನೀಡಿದ್ದಾರೆ.

Advertisement

ಭಾನುವಾರ ನಗರದಲ್ಲಿ ಐತಿಹಾಸಿಕ ತಾಜ್ ಬಾವಡಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ಮಾರಿಷಸ್ ನಲ್ಲಿ 10 ಸಾವಿರ ಕೋಟಿ ರೂ. ಹಣ ಇರಿಸಿದ್ದಾರೆಂದು ಬಿಜೆಪಿ ಪಕ್ಷದ ಹಿರಿಯ ಶಾಸಕ ಯತ್ನಾಳ ಬಹಿರಂಗ ಆರೋಪ ಮಾಡಿದ್ದಾರೆ. ಈ ಬಗ್ಗೆ ಉತ್ತರ ನೀಡಿದ ಬಳಿಕ ವಿಜಯೇಂದ್ರ ನಮ್ಮ ಪಕ್ಷದ ವಿರುದ್ಧ ಪಾದಯಾತ್ರೆ ಹೋರಾಟ ಮಾಡಲಿ ಎಂದು‌ ಕುಟುಕಿದರು.

ಮೂಡಾ ಹಗರಣ ಎಂದು ಆರೋಪಿಸುವ ಮುನ್ನ ಬಿಜೆಪಿ ಅಧಿಕಾರದಲ್ಲಿದ್ದಾಗ ನಡೆದಿರುವ ಕೋವಿಡ್ ಭ್ರಷ್ಟಾಚಾರ, ಬೋವಿ ನಿಗಮ ಸೇರಿದಂತೆ ಇತರೆ ಹಗರಣಗಳ ಬಗ್ಗೆಯೂ ತನಿಖೆ ಆಗಬೇಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆಗೆ ಎದುರೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next