Advertisement

ಮತ್ತೆ ಕಿರುತೆರೆಯತ್ತ ಮಯೂರಿ ಚಿತ್ತ

12:40 PM Aug 03, 2023 | Team Udayavani |

ಕಿರುತೆರೆಯ “ಅಶ್ವಿ‌ನಿ ನಕ್ಷತ್ರ’ ಸೀರಿಯಲ್‌ ಮೂಲಕ ಬಣ್ಣದ ಲೋಕಕ್ಕೆ ಪರಿಚಯವಾದ ಮಯೂರಿ ಕ್ಯಾತರಿ ಮೊದಲ ಪ್ರಯತ್ನದಲ್ಲೇ ಕಿರುತೆರೆ ವೀಕ್ಷಕರ ಗಮನ ಸೆಳೆಯಲು ಯಶಸ್ವಿಯಾದ ನಟಿ.

Advertisement

“ಅಶ್ವಿ‌ನಿ ನಕ್ಷತ್ರ’ ಸೀರಿಯಲ್‌ ಬಳಿಕ, ಕಿರುತೆರೆಯಿಂದ ಹಿರಿತೆರೆಯತ್ತ ಮುಖ ಮಾಡಿದ ಮಯೂರಿ “ಕೃಷ್ಣಲೀಲಾ’ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ ಗೂ ಭರ್ಜರಿಯಾಗಿಯೇ ಎಂಟ್ರಿ ಕೊಟ್ಟಿದ್ದರು. ಅದಾದ ಬಳಿಕ ಒಂದಷ್ಟು ಸಿನಿಮಾಗಳಲ್ಲಿ ಬ್ಯಾಕ್‌ ಟು ಬ್ಯಾಕ್‌ ನಾಯಕಿಯಾಗಿ ನಟಿಸಿದ್ದ ಮಯೂರಿ, ಬೇಡಿಕೆಯಲ್ಲಿರುವಾಗಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

ಅದಾದ ನಂತರ ಸಂಸಾರ, ಮಗುವಿನ ಲಾಲನೆ-ಪಾಲನೆ ಅಂಥ ಕೆಲ ಕಾಲ ಬಣ್ಣದ ಲೋಕದಿಂದ ಬ್ರೇಕ್‌ ತೆಗೆದುಕೊಂಡಿದ್ದ ಮಯೂರಿ, ಆ ನಂತರ ಕಾಣಿಸಿಕೊಂಡಿದ್ದು, “ಬಿಗ್‌ಬಾಸ್‌’ ಮತ್ತಿತರ ರಿಯಾಲಿಟಿ ಶೋಗಳಲ್ಲಿ.  ಇದೀಗ ಮಯೂರಿ ಮತ್ತೆ ಕಿರುತೆರೆಯಲ್ಲಿ ಸೆಕೆಂಡ್‌ ಇನ್ನಿಂಗ್ಸ್‌ ಆರಂಭಿಸುವ ತಯಾರಿಯಲ್ಲಿದ್ದಾರೆ.

ಹೌದು, ಸದ್ಯ ಕಿರುತೆರೆಯ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ “ಉಧೋ ಉಧೋ ಶ್ರೀರೇಣುಕಾ ಯಲ್ಲಮ್ಮ’ ಎಂಬ ಸೀರಿಯನ್‌ನಲ್ಲಿ ನಟಿ ಮಯೂರಿ ಬಣ್ಣ ಹಚ್ಚುತ್ತಿದ್ದಾರೆ. ಸೀರಿಯಲ್‌ನಲ್ಲಿ ಬರುವ ಮಾಟಗಾತಿ ಕನಕಾಂಬರಿ ಎಂಬ ವಿಶೇಷ ಪಾತ್ರಕ್ಕೆ ಮಯೂರಿ ಜೀವ ತುಂಬಿದ್ದು, ಮೊದಲ ಬಾರಿಗೆ ಹೊಸಥರದ ಪಾತ್ರದಲ್ಲಿ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next