Advertisement

Kanhangad ಹಳಿ ಬದಲಾಗಿ ಸಂಚರಿಸಿದ ಮಾವೇಲಿ ಎಕ್ಸ್‌ಪ್ರೆಸ್‌: ತಪ್ಪಿದ ಭಾರೀ ದುರಂತ

06:18 PM Oct 27, 2023 | Team Udayavani |

ಕಾಸರಗೋಡು: ಮಂಗಳೂರಿನಿಂದ ತಿರುವನಂತಪುರಕ್ಕೆ ಪ್ರಯಾಣಿಸುತ್ತಿದ್ದ ಮಾವೇಲಿ ಎಕ್ಸ್‌ಪ್ರೆಸ್‌ ರೈಲು ಹಳಿ ಬದಲಾಗಿ ಸಂಚರಿಸಿದುದು ಕೆಲವು ಹೊತ್ತು ಗೊಂದಲ ಹಾಗು ಆತಂಕಕ್ಕೆ ಕಾರಣವಾಯಿತು.

Advertisement

ಕಾಂಞಂಗಾಡ್‌ ರೈಲ್ವೇ ನಿಲ್ದಾಣದಲ್ಲಿ ಅ.26 ರಂದು ಸಂಜೆ 6.45 ರ ವೇಳೆ ಈ ಘಟನೆ ನಡೆದಿದೆ. ಒಂದನೇ ಫ್ಲಾಟ್‌ಫಾಂಗೆ ತಲುಪಬೇಕಾಗಿದ್ದ ರೈಲು ಫ್ಲಾಟ್‌ಫಾಂ ಇಲ್ಲದ ಮಧ್ಯದ ಹಳಿಯಲ್ಲಿ ಸಂಚರಿಸಿತ್ತು. ಈ ಹೊತ್ತಿನಲ್ಲಿ ಅದೇ ಹಳಿಯಲ್ಲಿ ಬೇರೆ ರೈಲು ಇಲ್ಲದಿದ್ದುದರಿಂದ ಸಂಭವನೀಯ ಭಾರೀ ದುರಂತ ತಪ್ಪಿತು.

ಇದೇ ರೈಲಿನಲ್ಲಿ ಪ್ರಯಾಣಿಸಬೇಕಾಗಿದ್ದವರು ಫ್ಲಾಟ್‌ಫಾಂನಿಂದ ಕೆಳಗಿಳಿದು ಕಷ್ಟಪಟ್ಟು ರೈಲು ಗಾಡಿಯನ್ನೇರಿದರು. ವಿದ್ಯುತ್‌ ದೀಪದ ಬೆಳಕು ಕಡಿಮೆಯಿದ್ದುದರಿಂದ ರಿಸರ್ವೇಶನ್‌ ಬೋಗಿಗಳನ್ನು ಹುಡುಕುವುದು ಪ್ರಯಾಣಿಕರಿಗೆ ಕಷ್ಟವಾಯಿತು.

ತಾಂತ್ರಿಕ ಕಾರಣದಿಂದಾಗಿ ಹಳಿ ಬದಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next