Advertisement

ಗಣಿತ ಪರೀಕ್ಷೆ: 137 ವಿದ್ಯಾರ್ಥಿಗಳು ಗೈರು

11:21 AM Jun 28, 2020 | Suhan S |

ಹುನಗುಂದ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಎರಡನೆಯ ದಿನದ ಗಣಿತ ಪರೀಕ್ಷೆ ಕೂಡಾ ಕೋವಿಡ್  ಭೀತಿಯಿಲ್ಲದೇ ವಿದ್ಯಾರ್ಥಿಗಳು ಸುಸೂತ್ರವಾಗಿ ಬರೆದರು ಎಂದು ಕ್ಷೇತ್ರ ಶಿಕ್ಷಣಾಧಿ ಕಾರಿ ಗುರುರಾಜ ದಾಶ್ಯಾಳ ಹೇಳಿದರು.

Advertisement

ಹುನಗುಂದ ಮತ್ತು ಇಳಕಲ್ಲ ಅವಳಿ ತಾಲೂಕಿನ 14 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 4684 ವಿದ್ಯಾರ್ಥಿಗಳಲ್ಲಿ 4547 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ಪರೀಕ್ಷೆಯನ್ನು ಬರೆದರೇ ಕೋವಿಡ್ ಭೀತಿಯ ಹಿನ್ನೆಲೆಯಲ್ಲಿ 137 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದರು. 14 ಪರೀಕ್ಷಾ ಕೇಂದ್ರಗಳ ಪೈಕಿ ಕಂಟೇನ್ಮೆಂಟ್‌ ಪ್ರದೇಶದಿಂದ ಬಂದ 9 ವಿದ್ಯಾರ್ಥಿಗಳಿಗೆ ನಿಗ  ಪಡಿಸಿದ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು. ಇನ್ನು ವಿಶೇಷ ಕೊಠಡಿಯಲ್ಲಿ ಶೀತ ಕೆಮ್ಮು,ನೆಗಡಿ ಇರುವ 3 ಜನ ವಿದ್ಯಾರ್ಥಿಗಳು ಪರೀಕ್ಷೆ ಬರೆದರು ಎಂದು ಬಿಇಒ ತಿಳಿಸಿದರು

Advertisement

Udayavani is now on Telegram. Click here to join our channel and stay updated with the latest news.

Next