Advertisement

ಡಾ|ಸಂಧ್ಯಾ ಎಸ್‌. ಪೈ, ಚೊಕ್ಕಾಡಿ ಸಹಿತ 6 ಮಂದಿಗೆ ಮಾಸ್ತಿ ಪ್ರಶಸ್ತಿ

01:04 AM Feb 16, 2021 | sudhir |

ಬೆಂಗಳೂರು: ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಟ್ರಸ್ಟ್‌ ನೀಡುವ 2020ನೇ ಸಾಲಿನ “ಮಾಸ್ತಿ ಪ್ರಶಸ್ತಿ’ಗಳನ್ನು ಪ್ರಕಟಿಸಲಾಗಿದ್ದು ತರಂಗ ವಾರ ಪತ್ರಿಕೆ ಮತ್ತು ತುಷಾರ ಮಾಸಿಕಗಳ ವ್ಯವಸ್ಥಾಪಕ ಸಂಪಾದಕರು, ಹಿರಿಯ ಲೇಖಕಿ ಡಾ| ಸಂಧ್ಯಾ ಎಸ್‌. ಪೈ (ಶಿಶು ಸಾಹಿತ್ಯ), ಸಾಹಿತಿ ಸುಬ್ರಾಯ ಚೊಕ್ಕಾಡಿ ಸಹಿತ ಆರು ಮಂದಿ ಆಯ್ಕೆ ಆಗಿದ್ದಾರೆ. ಮಾ. 27ರಂದು ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

Advertisement

ವಿಮರ್ಶಕ ಎಸ್‌.ಆರ್‌. ವಿಜಯಶಂಕರ್‌ (ವಿಮರ್ಶೆ), ಪ್ರೊ| ಪುರುಷೋತ್ತಮ ಬಿಳಿಮಲೆ (ಸಂಶೋಧನೆ), ಸುಬ್ರಾಯ ಚೊಕ್ಕಾಡಿ (ಕಾವ್ಯ), ಕೇಶವ ರೆಡ್ಡಿ ಹಂದ್ರಾಳ (ಕಥೆ) ಮತ್ತು ಸ. ರಘುನಾಥ (ಸೃಜನಶೀಲ) ಅವರು ಮಾಸ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಅವರ 129ನೇ ಸಂಸ್ಮರಣ ವರ್ಷ (ಮಾಸ್ತಿ ಪ್ರಶಸ್ತಿಯ 28ನೇ ವರ್ಷ)ದ ಅಂಗವಾಗಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.

ಮಾವಿನಕೆರೆ ರಂಗನಾಥ್‌ ನೇತೃತ್ವದ ಆಯ್ಕೆ ಸಮಿತಿಯಲ್ಲಿ ಪ್ರೊ| ಎಂ.ಎಚ್‌. ಕೃಷ್ಣಯ್ಯ, ಜಿ.ಎನ್‌. ರಂಗನಾಥ್‌ ರಾವ್‌, ಬಿ.ಆರ್‌. ಲಕ್ಷ್ಮಣ ರಾವ್‌, ಡಾ| ಕೃಷ್ಣಮೂರ್ತಿ ಹನೂರು, ಉಷಾ ಕೇಸರಿ ಮತ್ತು ಡಿ.ಎಂ. ರವಿಕುಮಾರ್‌ ಸದಸ್ಯರಾಗಿದ್ದಾರೆ. ಪ್ರಶಸ್ತಿ 25 ಸಾವಿರ ರೂ. ನಗದು ಮತ್ತು ಫ‌ಲಕ ಒಳಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next